ಬೆಂಗಳೂರು: ಬೆಂಗಳೂರಿನ ಯುವತಿ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಹೋದರರಿಬ್ಬರು ಅತ್ಯಾಚಾರ ಎಸಗಿ ಮತಾಂತರಕ್ಕೆ ಒತ್ತಾಯ ಮಾಡಿದ್ದಾರೆಂದು ಆರೋಪಿಸಿ ಯುವತಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಯುವತಿ ನೀಡಿದ ದೂರು ಆಧರಿಸಿ ಶಬ್ಬಿರ್ ಅಹಮ್ಮದ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಸಹೋದರ ಮೊಹಮ್ಮದ್ ರಿಲ್ವಾನ್ ಬಂಧನಕ್ಕೆ ಬಲೆ ಬೀಸಿದ್ದಾರೆ.ಬೆಂಗಳೂರಿನ ಸ್ಪಾ ದಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು 2018 ರಲ್ಲಿ ಅಲ್ಲಿಗೆ ಬರುತ್ತಿದ್ದ ಬೆಳ್ತಂಗಡಿ ಮೂಲದ ಶಬ್ಬೀರ್ ಪರಿಚಯವಾಗಿದ್ದ.
ಬ್ರಿಗೇಡ್ ರಸ್ತೆಯ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿಸಿ ಆಕೆಯನ್ನು ಹೋಟೆಲ್ ರೂಮ್ ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಯಾರಿಗಾದರೂ ವಿಷಯ ತಿಳಿಸಿದರೆ ಕೆಲಸದಿಂದ ತೆಗೆಯುವುದಾಗಿ, ಪೋಷಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಸಿಡ್ ಹಾಕುವುದಾಗಿಯೂ ಆರೋಪಿ ಬೆದರಿಸಿ 2019 ರ ವರೆಗೆ 4 ಸಲ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
2019 ರಲ್ಲಿ ಶಬ್ಬೀರ್ ಸಹೋದರ ರಿಲ್ವಾನ್, ಯುವತಿಯ ಸ್ನೇಹ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಇಚ್ಚೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.
ಯುವತಿಯ ಪೋಷಕರಿಂದ 1.50 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾನೆ. ಪೋಷಕರಿಗೆ ಇಷ್ಟವಿಲ್ಲದಿದ್ದರೂ ಯುವತಿಯ ಬಲವಂತಕ್ಕೆ ಪೋಷಕರು ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡಿದ್ದ ರಿಲ್ವಾನ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಬಲವಂತ ಮಾಡಿದ್ದು ಒಪ್ಪದಿದ್ದಾಗ ಯುವತಿಯಿಂದ ದೂರವಾಗಿದ್ದಾನೆ.
ಯುವತಿ ಆತನ ಪರಿಚಿತರ ಬಳಿ ವಿಚಾರಿಸಿದಾಗ 2020 ರ ಸೆಪ್ಟಂಬರ್ 14ರಂದು ಮಂಗಳೂರು ಮೂಲದ ಯುವತಿಯೊಂದಿಗೆ ಆತ ಮದುವೆಯಾಗಿರುವುದು ತಿಳಿಯುತ್ತದೆ. ಆ ಫೋಟೋ ವಾಟ್ಸಾಫ್ ಗಳಲ್ಲಿ ಹರಿಡಾದುತ್ತಿದೆ.