- Advertisement -
- Advertisement -
ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವತಿಯ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಬೆತ್ತನಗೆರೆ ರಸ್ತೆಯ ಕುವೆಂಪುನಗರದಲ್ಲಿ ನಡೆದಿದೆ.
ಇದನ್ನೂ ಓದಿ: ರುಚಿಯಾಗಿ ಚಿಕನ್ ಫ್ರೈ ಮಾಡಿಕೊಟ್ಟಿಲ್ಲವೆಂದು ಹೆಂಡತಿಯನ್ನೇ ಕೊಲೆಗೈದ ಪತಿರಾಯ
ಕೊಲೆಯಾದ ಯುವತಿಯ ತಂದೆಯನ್ನು ನಾಗಪ್ಪ (48)ಎನ್ನಲಾಗಿದೆ. ಆರೋಪಿಗಳು ಪಾಗಲ್ ಪ್ರೇಮಿ ನರೇಶ್ (28) ಮತ್ತು ಆತನ ನಾಲ್ವರು ಸಹಚರರು ಎಂದು ತಿಳಿದುಬಂದಿದೆ.
ಕಳೆದ ಒಂದು ವರ್ಷದಿಂದ ಯುವತಿಯನ್ನು ನರೇಶ್ ಪ್ರೀತಿಸುತ್ತಿದ್ದು, ಆತನ ಪ್ರೀತಿಯನ್ನು ಯುವತಿ ಮತ್ತು ತಂದೆ ವಿರೋಧಿಸಿದ್ದರು. ಈ ಹಿನ್ನಲೆ ಯುವತಿಯ ತಂದೆಯನ್ನು ರಾಡ್ ನಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಈ ಘಟನೆ ಬಗ್ಗೆ ನೆಲಮಂಗಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Advertisement -