- Advertisement -
- Advertisement -
ಹಾವೇರಿ(ನ.9): ಬೈ-ಎಲೆಕ್ಷನ್ ಫಲಿತಾಂಶ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿವೆ. ನನಗೂ ಸಹ ಸಚಿವ ಸ್ಥಾನ ಸಿಗಲಿದೆ ಅಂತಾ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಇಂದು ಜಿಲ್ಲೆಯ ಕಾಗಿನೆಲೆಯಲ್ಲಿ ರಾಜ್ಯಮಟ್ಟದ ಕುರುಬ ಮಹಿಳಾ ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ಎಂಟಿಬಿ ನಾಗರಾಜ್ ನಾನು ಕಾಂಗ್ರೆಸ್ನಲ್ಲಿಯೂ ಸಚಿವನಾಗಿದ್ದೆ.ಅಲ್ಲಿಂದ ಬಿಟ್ಟು ಇದೀಗ ಬಿಜೆಪಿಯಲ್ಲಿದ್ದೇನೆ. ಇನ್ಮೇಲೆಯೂ ನಾನು ಸಚಿವ ಆಗಿಯೇ ಆಗ್ತೀನಿ. ನನಗೆ ಯಾವುದೇ ಖಾತೆ ನೀಡಿದರು ಸಮರ್ಪಕವಾಗಿ ನಿಭಾಯಿಸುವೆ ಎಂದಿದ್ದಾರೆ.
- Advertisement -