Saturday, April 27, 2024
spot_imgspot_img
spot_imgspot_img

ಖತರ್ನಾಕ್ ಕಳ್ಳರು.. 3 ದ್ವಿಚಕ್ರ ವಾಹನ, 43 ಮೊಬೈಲ್, 22 ಲಕ್ಷ ರೂಪಾಯಿಯ 337 ಗ್ರಾಂ ಚಿನ್ನ , 1,15,000 ರೂಪಾಯಿ ನಗದು!!

- Advertisement -G L Acharya panikkar
- Advertisement -

ಬೆಂಗಳೂರು: ಬೆಂಗಳೂರು ಜನರಿಗೆ ಚಾಕು ತೋರಿಸಿ ಮೊಬೈಲ್ ಕಿತ್ತುಕೊಂಡು ಎಸ್ಕೇಪ್ ಆಗ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಅಫ್ಜಲ್​ ಪಾಷಾ, ಅಫ್ರಿದ್​ ಖಾನ್​ ಹಾಗೂ ಪ್ರವೀಣ್​ ಕುಮಾರ್​ ಬಂಧಿತರು.

ಉಪ್ಪಾರಪೇಟೆಯ ಕೆಂಪೇಗೌಡ ನಗರದ ಬಳಿ ವ್ಯಕ್ತಿಯೊಬ್ಬರು ಮಾತನಾಡುತ್ತಿದ್ದಾಗ ಸ್ಕೂಟರ್​ನಲ್ಲಿ ಬಂದ ಇಬ್ಬರು ಆಸಾಮಿಗಳು ಮೊಬೈಲ್​ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 3 ದ್ವಿಚಕ್ರ ವಾಹನಗಳು, 43 ಮೊಬೈಲ್ ಫೋನ್, 22 ಲಕ್ಷ ರೂಪಾಯಿ ಬೆಲೆ ಬಾಳುವ 337 ಗ್ರಾಂ ಚಿನ್ನ ಹಾಗೂ 1,15,000 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

Related news

error: Content is protected !!