ಸ್ಯಾಂಡಲ್ವುಡ್ ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್ಗೆ ಹೃದಯಾಘಾತವಾಗಿದ್ದು, ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಚೇತರಿಕೆ ಕಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
74 ವರ್ಷ ವಯಸ್ಸಿನ ಅವರನ್ನು ನಿನ್ನೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರಿಗೆ ಆಂಜಿಯೋಗ್ರಾಮ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸ್ನೇಹಿತನಿಗೆ ಹೃದಯಾಘಾತವಾದ ಸುದ್ದಿ ತಿಳಿದು ಹಿರಿಯನಟ ಬಿರಾದಾರ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಆದರೆ ಐಸಿಯೂನಲ್ಲಿ ಇದ್ದ ಕಾರಣ ಜನಾರ್ಧನ್ ಅವರ ನೋಡಲು ವೈದ್ಯರು ಅನುಮತಿ ನಿರಾಕರಿಸಿದ್ದಾರೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕವೇ ಅಭಿಮಾನಿಗಳನ್ನು ಗೆದ್ದ ಬ್ಯಾಂಕ್ ಜನಾರ್ಧನ ಅವರು ಬೇಗ ಗುಣಮುಖರಾಗಲೆಂದು ಕುಟುಂಬದವರು, ಬಂಧು-ಮಿತ್ರರು ಹಾರೈಸುತ್ತಿದ್ದಾರೆ.ಬ್ಯಾಂಕ್ ಜನಾರ್ಧನ್ ಅವರ ಸಿನಿಮಾ ವಿಚಾರಕ್ಕೆ ಬರೋದಾದ್ರೆ, ‘ತರ್ಲೆ ನನ್ ಮಗ’, ‘ಗಣೇಶ್ ಸಬ್ರಮಣ್ಯ’ ಹೀಗೆ ಹಲವಾರು ಸಿನಿಮಾಗಳಲ್ಲಿ ಈ ಹಾಸ್ಯನಟ ನಟಿಸಿದ್ದಾರೆ. ಮಾತ್ರವಲ್ಲದೆ ಒಂದು ಕಾಲದಲ್ಲಿ ಬೇಡಿಕೆ ಹಾಸ್ಯ ನಟನಾಗಿಯೂ ಗುರುತಿಸಿಕೊಂಡಿದ್ದರು.