Tuesday, May 7, 2024
spot_imgspot_img
spot_imgspot_img

ಬಂಟ್ವಾಳ: ಪತ್ನಿಗೆ ಮನೆಯಿಂದ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಹಲ್ಲೆ; ಆರೋಪಿ ಉಮ್ಮರ್ ಫಾರೂಕ್ ಸಹಿತ 7 ಜನರ ವಿರುದ್ದ ಪ್ರಕರಣ ದಾಖಲು

- Advertisement -G L Acharya panikkar
- Advertisement -

ಬಂಟ್ವಾಳ: ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರ ಎಂಬಲ್ಲಿ ನಡೆದಿದೆ.

ಆರೋಪಿಗಳಾದ ಉಮ್ಮರ್ ಫಾರೂಕ್, ಮುಸ್ತಫ, ರಿಯಾಝ್, ಮೊಹಮ್ಮದ್ ಅಲಿಯಾಸ್ ಬಡ್ಡಿ ಮೊಹಮ್ಮದ್, ದುಲೈಕಾ, ಅಸ್ಮಾ, ಹರ್ಷಿದಾ ಎನ್ನಲಾಗಿದೆ. ಹಲ್ಲೆಗೊಳಗಾದ ಮಹಿಳೆ ಬಿ.ಬಿ. ಫಾತಿಮಾ ಎಂದು ಗುರುತಿಸಲಾಗಿದೆ.

ಮಹಿಳೆ ಫಾತಿಮಾರವರು ಉಮ್ಮರ್ ಫಾರೂಕ್‌ರನ್ನು 05-07-2009ರಂದು ಅಲ್ ಖಜಾನ್ ಹಾಲ್ ತಲಪಾಡಿಯಲ್ಲಿ ಸಂಪ್ರದಾಯದಂತೆ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ 5 ಲಕ್ಷ ರೂ. ಹಾಗೂ 63 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ನೀಡಲಾಗಿದ್ದು ಮದುವೆ ಬಳಿಕ ಆರೋಪಿಯು ತವರು ಮನೆಯಿಂದ ಹೆಚ್ಚಿನ ಹಣವನ್ನು ತಂದು ಕೊಡುವಂತೆ ಪ್ರತಿದಿನ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆನಡೆಸುತ್ತಿದ್ದನು. ಗಂಡ ಸಮಯ ಹೊಡೆಯುವ ಸಮಯ ನಾದಿನಿ ದುಲೈಕಾ ಹಾಗೂ ಮುಸ್ತಫಾ ಹೆಂಡತಿ ಹರ್ಷಿದಾ ಕೂಡ ಕುಮ್ಮಕ್ಕು ನೀಡುತ್ತಿದ್ದರು. ನಾದಿನಿ ದುಲೈಕಾ ಗಂಡನಿಗೆ ಕೋಲು ತಂದು ಕೊಡುತ್ತಿದ್ದಳು. ಗಂಡ ಉಮ್ಮರ್ ಫಾರೂಕ್ ಅಮಲು ಪದಾರ್ಥ ಸೇವಿಸಿ ಬಂದು ಫಾತಿಮಾಳಿಗೆ ತಲೆಗೆ, ಎದೆಗೆ ಹೊಡೆದು, ಇಸ್ತ್ರಿ ಪೆಟ್ಟಿಗೆಯಲ್ಲಿ ಮೈಯನ್ನು ಸುಟ್ಟಿರುತ್ತಾನೆ. ಉಮ್ಮರ್ ಫಾರೂಕ್ ಸಹೋದರರಾದ ಮುಸ್ತಫಾ, ರಿಯಾಜ್ ಫಾತಿಮಾಳಿಗೆ ಹಣಕೊಡುವಂತೆ ಒತ್ತಾಯಿಸುತ್ತಿದ್ದು ಇಲ್ಲವಾದರೆ ತಂದೆಯ ಮರ್ಯಾದೆ ತೆಗೆಯುವುದಾಗಿ ಬೆದರಿಸುತ್ತಿದ್ದರು. ಗಂಡನ ಅಣ್ಣ ಮೊಹಮ್ಮದ್ ಗಂಡ ಮನೆಯಲ್ಲಿಲ್ಲದಾಗ ರೂಮಿಗೆ ಪ್ರವೇಶಿಸಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಬಳಿಕ ಫಾತಿಮಾ ತನ್ನ ತಂದೆಯ ಬಳಿ ತಿಳಿಸಿದಾಗ ನಂದಾವರದಲ್ಲಿ ಫ್ಲ್ಯಾಟ್ ಖರೀದಿಸಿ ನೀಡಿರುತ್ತಾರೆ. ಅಲ್ಲಿಗೆ ಆರೋಪಿಗಳಾದ ಉಮ್ಮರ್ ಫಾರೂಕ್ ಹಾಗೂ ಮನೆಯವರು ಬಂದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ ಎಂದು ದೂರು ನೀಡಿರುತ್ತಾರೆ.

ದಿನಾಂಕ 30-12-2023 ರಂದು ಆರೋಪಿ ಉಮ್ಮರ್ ಫಾರೂಕ್ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ಮೂರು ಬಾರಿ ತಲಾಕ್ ಹೇಳಿ ರಕ್ತ ಬರುವಂತೆ ಹೊಡೆದು, ನೀನು ನನಗೆ ಬೇಡ ನಾನು ಬೇರೆ ಮದುವೆಯಾಗುತ್ತೇನೆ ಎಂದು ಹೇಳಿ 33 ಪವನ್ ಚಿನ್ನವನ್ನು ತೆಗೆದುಕೊಂಡು ಹೋಗಿರುತ್ತಾನೆ ಎಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!