Saturday, June 28, 2025
spot_imgspot_img
spot_imgspot_img

ಬಂಟ್ವಾಳ: ಜಮೀನಿಗೆ ಅಕ್ರಮ ಪ್ರವೇಶ; ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ..!

- Advertisement -
- Advertisement -

ಬಂಟ್ವಾಳ: ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಮರಗಳನ್ನು ಕಡಿಯಲು ಬಂದವರನ್ನು ಪ್ರಶ್ನಿಸಿದಾಗ ಅವ್ಯಾಚ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮ ಏಮಾಜೆ ಎಂಬಲ್ಲಿ ನಡೆದಿದೆ.

ನೆಟ್ಲ ಮುಡ್ನೂರು ಗ್ರಾಮ ಬಂಟ್ವಾಳ ನಿವಾಸಿ ಹೇಮಾವತಿ ಮೋಹನ್‌ (56) ಎಂಬವರ ಜಮೀನಿಗೆ ಆರೋಪಿಗಳಾದ ಸುಮತಿ ಮತ್ತು ಅವರ ಮನೆಯವರು ಹಾಗೂ ಚಂದ್ರಹಾಸ ನಲ್ಕೆ ಎಂಬವರ ಜೊತೆ ಅಕ್ರಮ ಕೂಟ ಸೇರಿಕೊಂಡು ಅಕ್ರಮ ಪ್ರವೇಶ ಮಾಡಿ ಮರಗಳನ್ನು ಕಡಿಯಲು ಪ್ರಯತ್ನಿಸಿದಾಗ, ಪ್ರಶ್ನಿಸಿದಕ್ಕೆ ಹೇಮಾವತಿ ಮೋಹನ್‌ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಚಂದ್ರಹಾಸ ಮತ್ತು ಸುಮತಿ ರವರು ಹಲ್ಲೆ ನಡೆಸಿರುತ್ತಾರೆ.

ಸ್ಥಳದಲ್ಲಿದ್ದ ಆರೋಪಿತೆ ಸುಮತಿರವರ ಮಕ್ಕಳು ಹಾಗೂ ಆಕೆಯ ಗಂಡ ನಾರಾಯಣ ದಾಸ್ ಹಾಗೂ ಚಂದ್ರಹಾಸ ನಲ್ಕೆ ರವರು ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಸ್ಥಳದಿಂದ ಹೊರಟು ಹೋಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!