Tuesday, May 7, 2024
spot_imgspot_img
spot_imgspot_img

ಬಂಟ್ವಾಳ: ಅಕ್ರಮ ಮರಳು ಸಾಗಾಟ; ಲಾರಿ ಸಹಿತ ಆರೋಪಿ ಅರೆಸ್ಟ್..!

- Advertisement -G L Acharya panikkar
- Advertisement -

ಬಂಟ್ವಾಳ: ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಮರಳು ತುಂಬಿದ ಲಾರಿ ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಬಡಗಬೆಳ್ಳೂರು ಗ್ರಾಮದ ಮಾಯಿಪಡ್ಕ ಎಂಬಲ್ಲಿ ನಡೆದಿದೆ.

ಲಾರಿ ಚಾಲಕ ಹಾಗೂ ಮಾಲಕ ಶಶಿಧರ ಶೆಟ್ಟಿ ಎಂದು ಗುರುತಿಸಲಾಗಿದೆ.

ಬಡಗಬೆಳ್ಳೂರು ಗ್ರಾಮದ ಮಾಯಿಪಡ್ಕ ಎಂಬಲ್ಲಿ ಬಂಟ್ವಾಳ ಗ್ರಾಮಾಂತರ ಪೆಂಲೀಸ್ ಠಾಣಾ ಪೆಂಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಬಿ ಅವರ ನೇತೃತ್ವದ ಪೊಲೀಸರು ಕೆಎ 19 ಎಎ 5713 ನೋಂದಣಿ ಸಂಖ್ಯೆಯ ಟಿಪ್ಪ‌ರ್ ಲಾರಿಯನ್ನು ತಪಾಸಣೆಗಾಗಿ ತಡೆದು ಪರಿಶೀಲಿಸಿದಾಗ, ಲಾರಿಯಲ್ಲಿ ಮರಳು ತುಂಬಿಸಿರುವುದು ಕಂಡು ಬಂದಿದೆ.

ಮರಳನ್ನು ಅಡ್ಡರು ಎಂಬಲ್ಲಿಂದ ಕಳವು ಮಾಡಿಕೊಂಡು ಬಂದಿರುವುದಾಗಿ ಲಾರಿ ಚಾಲಕ ಹಾಗೂ ಮಾಲಕ ಶಶಿಧರ ಶೆಟ್ಟಿ ಎಂಬಾತ ಒಪ್ಪಿಕೊಂಡಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ‌ ಲಾರಿಯನ್ನು ಮರಳಿನೊಂದಿಗೆ ವಶಕ್ಕೆ ಪಡೆದು, ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 41/2024 ಕಲಂ : 379 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!