- Advertisement -
- Advertisement -
ವ್ಯಾಪಾರಕ್ಕೆ ತೆರಳಿದ್ದ ಬಾಲಕನನ್ನು ಬರ್ಬರ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೇರಿಯಲ್ಲಿ ನಡೆದಿದೆ.
ಕಾಮಪ್ಪಾ (16) ಹತ್ಯೆಯಾದ ಬಾಲಕ. ಕಳೆದ ಮೂರು ದಿನದ ಹಿಂದೆ ಹಾರೋಗೇರಿಗೆ ಕೂದಲು ಮಾರಾಟ ಮಾಡಲು ವಿಜಯಪುರದಿಂದ ಕಾಮಪ್ಪಾ ಮತ್ತು ರೋಹಿತ್ ಎಂಬ ಬಾಲಕರು ತೆರಳಿದ್ದರು. ಈ ವೇಳೆ ವ್ಯಾಪಾರಕ್ಕೆ ಹಾರೋಗೇರಿಗೆ ಬಂದಿದ್ಯಾಕೆ ಎಂದು ಗಂಗಪ್ಪಾ ಹಾಗೂ ಅವನ ತಂದೆ ಸೇರಿದಂತೆ 15 ಜನರು ಸೇರಿ ಬಡಿಗೆ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿ ಕಾಮಪ್ಪಾನನ್ನು ಹತ್ಯೆ ಮಾಡಿದ್ದು, ನಂತರ ಮೃತದೇಹವನ್ನು ಬಾವಿಯಲ್ಲಿ ಎಸೆದಿದ್ದಾರೆ.
ಸದ್ಯ ಬಾವಿಯಲ್ಲಿ ಕಾಮಪ್ಪಾ ಮೃತ ದೇಹ ಪತ್ತೆಯಾಗಿದ್ದು, ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಲು ಕಾಮಪ್ಪಾ ಕುಟುಂಬಸ್ಥರು ಆಗ್ರಹಿಸಿದ್ದಾರೆ.
- Advertisement -