



ಬೆಳ್ಳಾರೆಯ ಯುವ ಉದ್ಯಮಿಯೋರ್ವರನ್ನು ತಂಡವೊಂದು ಕಿಡ್ನಾಪ್ ಮಾಡಿರುವ ಬಗ್ಗೆ ವರದಿಯಾಗಿದೆ.
ಮನೆಗೆ ಬಂದ ತಂಡವೊಂದು ಮನೆಗೆ ನುಗ್ಗಿ ಕಾಮಧೇನು ಜ್ಯುವೆಲ್ಲರ್ ನ ಮಾಲೀಕ, ಉದ್ಯಮಿ ನವೀನ್ ಮಲ್ಲಾರರನ್ನು ಕಿಡ್ನಾಪ್ ಮಾಡಿದ್ದು, ಅವರ ತಾಯಿಯನ್ನು ತಳ್ಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಆಂಬ್ಯುಲೆನ್ಸ್ ನಲ್ಲಿ ದುಷ್ಕರ್ಮಿಗಳು ಬಂದಿರುವುದಾಗಿ ಹೇಳಲಾಗುತ್ತಿದೆ. ಉದ್ಯಮಿ ನವೀನ್ ಅವರ ತಾಯಿ ನೀರಜಾರವರು ಪ್ರತಿಕ್ರಿಯೆ ನೀಡಿದ್ದು, ”ಮಗನನ್ನು ನನ್ನ ಕಣ್ಣೆದುರೇ ಎಳೆದೊಯ್ಯಲಾಗಿದೆ. ನನಗೆ ಮಗ ಬೇಕು” ಎಂದಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಲು ತಾಯಿ ನೀರಜಾ ಹೋದರಾದರೂ ಪೊಲೀಸರು ಹೇಳಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ನೀರಜಾರವರು ಆರೋಪಿಸಿದ್ದಾರೆ.

ಇನ್ನು ಸ್ವಂತ ಅತ್ತೆಯ ಕೈವಾಡ ಇದೆ ಎಂಬ ಶಂಕೆ..?!
ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ದಿವ್ಯ ಪ್ರಭಾ ಗೌಡ ಚಿಲ್ತಡ್ಕ ಮತ್ತು ಆಕೆಯ ಮಗಳು ಸ್ಪಂದನಾ ಹಾಗೂ ಇನ್ನೂ ಹಲವರು ಸೇರಿಕೊಂಡು ನವೀನ್ ಮಲ್ಲಾರ ಎಂಬವರನ್ನು ಅಪಹರಿಸಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಸದ್ಯದ ಮಾಹಿತಿಯ ಪ್ರಕಾರ ಮಡಿಕೇರಿ ಬಳಿ ನವೀನ್ ಅವರನ್ನು ಅಪಹರಿಸಿರುವ ವಾಹನವನ್ನು ತಡೆಯಲಾಗಿದೆ. ಶುಂಠಿಕೊಪ್ಪ ಎಂಬಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಯಾವ ಕಾರಣಕ್ಕಾಗಿ ಕಿಡ್ನಾಪ್ ಮಾಡಿದ್ದಾರೆ ಎಂಬ ವಿಷಯ ವಿಚಾರಣೆ ಬಳಿಕವಷ್ಟೇ ತಿಳಿದುಬರಬೇಕಾಗಿದೆ.
ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆ
ಹಾಡಹಗಲೇ ನಡೆದ ಈ ಘಟನೆ ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಪ್ರತಿಷ್ಟಿತ ವ್ಯಕ್ತಿಗಳ ಖಾಸಗಿ ವಿಡಿಯೋ ನವೀನ್ ಅವರ ಬಳಿ ಇದೆ. ಹೀಗಾಗಿ ಇವರನ್ನು ಕಿಡ್ನಾಪ್ ಮಾಡಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.