Sunday, May 5, 2024
spot_imgspot_img
spot_imgspot_img

ಬೆಳ್ಳಾರೆ: ಅವಾಚ್ಯ ಶಬ್ದಗಳಿಂದ ಬೈದು, ವ್ಯಕ್ತಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆ..!

- Advertisement -G L Acharya panikkar
- Advertisement -

ಬೆಳ್ಳಾರೆ: ವ್ಯಕ್ತಿಯೋರ್ವರಿಗೆ ವಂತಿಗೆಯ ವಿಚಾರದಲ್ಲಿ ತಕರಾರು ತೆಗೆದು, ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಸವಣೂರು ಮಸೀದಿಯ ಬಳಿ ನಡೆದಿದೆ.

ಆರೋಪಿಯನ್ನು ಹಸೈನಾರ್ ಎಂದು ಗುರುತಿಸಲಾಗಿದೆ.

ಪುಣ್ಚಪ್ಪಾಡಿ ಗ್ರಾಮ ಕಡಬ ನಿವಾಸಿ ಅಬ್ದುಲ್ ಗಫೂರ್ (45) ಎಂಬವರು ಮಧ್ಯಾಹ್ನ ಸವಣೂರು ಮಸೀದಿಯ ಬಳಿ ತನ್ನ ಪರಿಚಯದ ಮಹಮ್ಮದ್ ಎಂಬರೊಂದಿಗೆ ಮಾತನಾಡುತ್ತಿದ್ದಾಗ, ಆರೋಪಿ ಹಸೈನಾರ್ ಗಫೂರ್ ಬಳಿ ಬಂದು ವಂತಿಗೆಯ ವಿಚಾರದಲ್ಲಿ ತಕರಾರು ತೆಗೆದು, ಬೈದಿರುವುದಾಗಿದೆ. ಬಳಿಕ ಆರೋಪಿಯ ಬಳಿಯಿದ್ದ ಕತ್ತಿಯಿಂದ ಹಲ್ಲೆ ನಡೆಸಿದ್ದು, ಇದರಿಂದ ರಕ್ತಗಾಯವಾಗಿರುತ್ತದೆ.

ಘಟನಾ ಸ್ಥಳಕ್ಕೆ ಫಿರ್ಯಾದಿಯ ಅಣ್ಣ ಅಬ್ದುಲ್ ರಜಾಕ್ ಮತ್ತು ಇತರರು ಬಂದಿದ್ದು, ಈ ವೇಳೆ ಆರೋಪಿತನು ಅಬ್ದುಲ್ ಗಫೂರ್ ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾನನೆ. ಈ ಘಟನೆ ಬಗ್ಗೆ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:25/2024 ಕಲಂ: 324, 307, 504, 506 ಐ ಪಿ ಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!