Saturday, June 28, 2025
spot_imgspot_img
spot_imgspot_img

ಬೆಳ್ತಂಗಡಿ: ಗ್ರಾಮ ಸಭೆಯಲ್ಲಿ ದೇವಸ್ಥಾನದ ಖರ್ಚು ವೆಚ್ಚಗಳ ಬಗ್ಗೆ ಮಾತಿನ ಚಕಮಕಿ, ಹಲ್ಲೆ ; ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ :ಗ್ರಾಮ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಗಳಿಬ್ಬರ ನಡುವೆ ದೇವಸ್ಥಾನವೊಂದರ ಖರ್ಚು ವೆಚ್ಚಗಳ ಬಗ್ಗೆ ಮಾತಿನ ಚಕಮಕಿ ನಡೆದ ಘಟನೆ ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ.

ಸೆ. 03 ರಂದು ಗ್ರಾಮ ಪಂಚಾಯತ್‌ನಲ್ಲಿ ಗ್ರಾಮ ಸಭೆ ನಡೆಯುತ್ತಿದ್ದಾಗ ಕುಶಾಲಪ್ಪ ಗೌಡ ಹಾಗೂ ನವೀನ ಸಾಲ್ಯಾನ್‌ರವರ ಮಧ್ಯೆ ದೇವಸ್ಥಾನವೊಂದರ ಖರ್ಚು ವೆಚ್ಚಗಳ ಬಗ್ಗೆ ಮಾತಿನ ಗಲಾಟೆ ನಡೆದಿದೆ. ಇದನ್ನು ಆನಂದ ಪೂಜಾರಿಯವರು ಆಕ್ಷೇಪಿಸಿದರು.

ಆ ಸಂದರ್ಭದಲ್ಲಿ ನವೀನ ಸಾಲ್ಯಾನ್ ಮತ್ತು ಇತರ ಆರೋಪಿಗಳಾದ ರಾಮ್ ಕುಮಾರ್, ಚಿಂಕು ಯಾನೆ ರವೀಂದ್ರ, ದಿನೇಶ್ ಹಾಗೂ ಪುರುಷೋತ್ತಮರವರು ಆನಂದ ಪೂಜಾರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಗಲಾಟೆ ತಡೆಯಲು ಬಂದ ಮಹಿಳೆಯೋರ್ವರಿಗೂ ಆರೋಪಿ ಪುರುಷೋತ್ತಮ ಕೈಯಿಂದ ಹಲ್ಲೆ ನಡೆಸಿ, ಅನುಚಿತವಾಗಿ ವರ್ತಿಸಿದ್ದಾನೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 73/2024 ಕಲಂ : 352, 115(2), 74, 351(2) r/w 3(5) BNS-2023 ರಂತೆ ಪ್ರಕರಣ ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರ ಹಾಗೂ ರಾಮ್ ಕುಮಾರ್ ಎಂಬವರಿಗೆ, ಆರೋಪಿಗಳಾದ ಕುಶಾಲಪ್ಪ ಗೌಡ ಮತ್ತು ಆನಂದ ಪೂಜಾರಿ ಎಂಬುವವರು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿದ್ದಾರೆ ಎಂದು ನೀಡಿದ ಪ್ರತಿದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 74/2024 ಕಲಂ :, 118(1), 352 R/W 3(5) BNS-2023 ರಂತೆ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣಗಳನ್ನೂ ವೇಣೂರು ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸಲಾಗುತ್ತಿದೆ

- Advertisement -

Related news

error: Content is protected !!