Sunday, June 29, 2025
spot_imgspot_img
spot_imgspot_img

ಬೆಳ್ತಂಗಡಿ: ಒಣಮೆಣಸು ವ್ಯಾಪಾರಿಯ ದ್ವಿಚಕ್ರ ವಾಹನ ಕಳವು..!

- Advertisement -
- Advertisement -

ಬೆಳ್ತಂಗಡಿ: ಒಣಮೆಣಸು ಮಾರಾಟ ಮಾಡುತಿರುವ ವ್ಯಾಪಾರಿಯ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿ ನಡೆದಿದೆ.

ಚಿಕ್ಕಮಗಳೂರು ಕುರುಬರ ಬೂದಿಹಾಳ ಗ್ರಾಮ ನಿವಾಸಿ ಕೆ ಟಿ ಕೃಷ್ನಶೆಟ್ಟಿ (54) ಎಂಬವರ ಬೈಕ್.

ಮೋಟಾರ್‌ ಸೈಕಲ್‌ ನಲ್ಲಿ ಒಣಮೆಣಸನ್ನು ಇರಿಸಿಕೊಂಡು, ಬೆಳ್ತಂಗಡಿ ತಾಲೂಕಿನ ಗ್ರಾಮದಲ್ಲಿ ಮಾರಾಟ ಮಾಡಿ, ಎಲ್ಲಾ ಒಣಮೆಣಸು ವ್ಯಾಪಾರವಾದ ನಂತರ, ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ವಾಹನ ಪಾರ್ಕಿಂಗ್‌ ಸ್ಥಳದಲ್ಲಿ ಮೋಟಾರ್‌ ಸೈಕಲ್‌ ಅನ್ನು ನಿಲ್ಲಿಸಿ, ಸ್ನಾನ ಮಾಡಲು ನದಿಗೆ ತೆರಳಿದ್ದು, ಸ್ನಾನ ಮುಗಿಸಿ ನಂತರ ಪಾರ್ಕಿಂಗ್‌ ಸ್ಥಳಕ್ಕೆ ಬಂದಾಗ ಮೋಟಾರ್‌ ಸೈಕಲ್‌ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳೆದು ಹೋದ ಮೋಟಾರ್‌ ಸೈಕಲ್‌ ನ ಅಂದಾಜು ಮೌಲ್ಯ ರೂ 30,000/- ಆಗಬಹುದು ಎಂಬುದಾಗಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!