Saturday, June 28, 2025
spot_imgspot_img
spot_imgspot_img

ಬೆಟ್ಟಂಪಾಡಿ: ಅನುಮಾನಾಸ್ಪದವಾಗಿ ಯುವಕ ಸಾವು; ಕೊಲೆ ಶಂಕೆ..!

- Advertisement -
- Advertisement -

ಪುತ್ತೂರು: ಅನುಮಾನಸ್ಪದವಾಗಿ ಯುವಕನೋರ್ವನ ಶವ ಪತ್ತೆಯಾಗಿದ್ದು, ಕೊಲೆ ಎಂಬ ಶಂಕೆ ವ್ಯಕ್ತವಾದ ಘಟನೆ ಬೆಟ್ಟಂಪಾಡಿ ಗ್ರಾಮದ ಬರೆ ಎಂಬಲ್ಲಿ ನಡೆದಿದೆ.

ಮೃತಪಟ್ಟ ಯುವಕ ಬೆಟ್ಟಂಪಾಡಿ ಬರೆ ದಿ.ಕೊರಗಪ್ಪ ಶೆಟ್ಟಿ ಯವರ ಪುತ್ರ ಚೇತನ್ (33) ಎಂದು ಗುರುತಿಸಲಾಗಿದೆ.

ಅನುಮಾನಸ್ಪದವಾಗಿ ಯುವಕನೋರ್ವನ ಶ ಪತ್ತೆಯಾಗಿದ್ದು, ಕೊಲೆ ಎಂಬ ಶಂಕೆ ವ್ಯಕ್ತವಾಗಿದ್ದು ಘಟನೆಗೆ ಸಂಬಂಧಪಟ್ಟ ಮೂವರನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.

ಮದ್ಯ ವ್ಯಸನಿಯಾಗಿದ್ದ ಚೇತನ್ ಮೇ.9ರಂದು ರಾತ್ರಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದರು. ನಂತರ ನೆರೆಯ ಮನೆಗೆ ಹೋಗಿ ಅಲ್ಲಿಯೂ ಗಲಾಟೆ ಮಾಡಿದ್ದರು. ಅಲ್ಲಿಂದ ಚೇತನ್ ರವರನ್ನು ಆತನ ತಾಯಿ, ಬಾವ ಹಾಗೂ ನೆರೆಯ ಮನೆಯ ವ್ಯಕ್ತಿ ಸೇರಿಕೊಂಡು ನಾಯಿಯ ಸಂಕೋಲೆಯಿಂದ ಕಟ್ಟಿ ಎಳೆದುಕೊಂಡು ಬಂದಿದ್ದರು. ಈ ವೇಳೆಗೆ ಸಂಕೋಲೆ ಕುತ್ತಿಗೆಗೆ ಬಿಗಿದು ಮೃತಪಟ್ಟಿರುವುದಾಗಿ ಸುದ್ದಿ ಹರಡಿದೆ.

ಯುವಕನ ಸಾವಿನ ಮೇಲೆ ಅನುಮಾನುಗಳು ಕಂಡು ಬಂದಿದ್ದು ಮೃತದೇಹವನ್ನು ಮಂಗಳೂರು ದೇರಳಕಟ್ಟೆಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡಯ್ಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಘಟನೆ ನಡೆದ ಸ್ಥಳ ಹಾಗೂ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -

Related news

error: Content is protected !!