


ಸೌತಡ್ಕ : ವಿಹಾನ್ ಲೋಹಿತ್ ಹಾಡಿರುವ ಭಕ್ತಿ ಪ್ರಧಾನ ದಾಸರ ಪದ ’ಗಣಪತಿ ಎನ್ನ ಪಾಲಿಸೋ…. ’ ದಿನಾಂಕ 14 ಏಪ್ರಿಲ್ ರಂದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬಿಡುಗಡೆಗೊಂಡಿದೆ.
ಈ ಸಂದರ್ಭದಲ್ಲಿ ಪೆರ್ನೆ ಕ್ಷೇತ್ರದ ಕೋಮರ ಕುಂಜಿ ಕಣ್ಣನ್, ಸಾವಿತ್ರಿ, ವಿಶ್ವನಾಥ ಪಾಟಾಳಿ ಅರಂತನಡ್ಕ, ವಿಶಾಲಾಕ್ಷಿ, ವಿಶ್ವಕಲಾನಿಕೇತನ ನೃತ್ಯ ಶಾಲಾ ಗುರುಗಳಾದ ವಿದುಷಿ ಸ್ವಸ್ತಿಕಾ ಆರ್ ಶೆಟ್ಟಿ, ಛಾಯಾಗ್ರಾಹಕ ಹಾಗು ಚಲನಚಿತ್ರ ನಿರ್ದೇಶಕ ಕರೋಪಾಡಿ ಅಕ್ಷಯ್ ನಾಯಕ್, ರಂಜಿನಿ ಲೋಹಿತ್, ವಿಹಾನ್ ಲೋಹಿತ್, ಯೋಗೀಶ್ ಗೌಡ ಉಪಸ್ಥಿತರಿದ್ದರು.
ಹಾಡಿಗೆ ಸಂಗೀತ ನಿರ್ದೇಶನಕ್ಕಾಗಿ ಸಾಥ್ವಿಕ್ ಪಡಿಯಾರ್ ಮಾಡಿದಾರೆ ಕೊಳಲು : ಸಾಥ್ವಿಕ್ ಪ್ರಭು , ವಾಯಲಿನ್ : ಜಗದೀಶ ಕುಂಬ್ರ, ಮೃದಂಗ & ಮೋರ್ಸಿಗ್ : ಬಾಲಕೃಷ್ಣ ಹೊಸಮನೆ ಇವರು ನುಡಿಸಿರುತಾರೆ.
ವಿಹಾನ್ ಲೋಹಿತ್ 8 ವರ್ಷದ ಬಾಲಕನಾಗಿದ್ದು, ಸಂಗೀತ ಮತ್ತು ಕಲೆಯ ಬಗ್ಗೆ ಅವರಿಗೆ ಅಪಾರವಾದ ಆಸಕ್ತಿ ಇದ್ದು ಪ್ರಸ್ತುತ ಅವರು ಕರ್ನಾಟಕ ಸಂಗೀತ, ಪಿಟೀಲು ಮತ್ತು ಕೀಬೋರ್ಡ್ ಕಲಿಯುತ್ತಿದ್ದಾನೆ, ಜೊತೆಗೆ ಫುಟ್ಬಾಲ್, ಈಜು ಮತ್ತು ಲೈವ್ ಸ್ಕೆಚ್ ಕಲಾವಿದನಾಗಿ ತಮ್ಮ ಪ್ರತಿಭೆಯನ್ನು ಅನ್ವೇಷಿಸುತ್ತಿದ್ದಾರೆ.
ವಿಹಾನ್ ಸಂಗೀತಗಾರನಾಗುವ ಕನಸು ಕಾಣುತ್ತಾರೆ ಅವರು ತನ್ನ ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಮೊದಲ ಹೆಜ್ಜೆಗಳನ್ನು ಇಡುತ್ತಿದ್ದಾರೆ: @Vihaanlohithofficial.