Sunday, May 19, 2024
spot_imgspot_img
spot_imgspot_img

ಮಗಳ ಮದುವೆಗಾಗಿ ಕೂಡಿಟ್ಟ ಹಣವನ್ನು ಆಕ್ಸಿಜನ್ ಖರೀದಿಸಲು ದೇಣಿಗೆ ನೀಡಿದ ರೈತ!

- Advertisement -G L Acharya panikkar
- Advertisement -

ಭೋಪಾಲ್: ಕರೊನಾದ ಅಟ್ಟಹಾಸ ಮಿತಿಮೀರಿರುವ ಈ ದಿನಗಳಲ್ಲಿ ಎಲ್ಲೆಲ್ಲೂ ಆಕ್ಸಿಜನ್‌ ಕೊರತೆ ಇದೆ. ಜೀವವಾಯು ಸಿಗದೇ ಮೃತಪಡುತ್ತಿರುವವರ ಸಂಖ್ಯೆಯೂ ಏರುಗತಿಯಲ್ಲಿ ಸಾಗಿದೆ.

ಬಹುತೇಕ ಮಂದಿ ಇಂಥ ಸಮಯದಲ್ಲಿ ಕೈಚೆಲ್ಲಿ ಕೂತಿರುವಾಗ ಇಲ್ಲೊಬ್ಬ ರೈತ ಮಾತ್ರ ಎಲ್ಲರೂ ಅಚ್ಚರಿ ಪಡುವಂಥ ಕೆಲಸ ಮಾಡಿದ್ದಾರೆ. ಮಗಳ ಮದುವೆಗಾಗಿ ಕೂಡಿಟ್ಟಿರುವ ಹಣವನ್ನು ಆಕ್ಸಿಜನ‌ ಖರೀದಿ ಮಾಡಲು ದೇಣಿಗೆ ನೀಡಿ ಔದಾರ್ಯ ಮೆರೆದಿದ್ದಾರೆ.

ಗ್ವಾಲ್ ದೇವಿಯಾನ್ ಗ್ರಾಮದ ಚಂಪಾಲಾಲ್ ಗುರ್ಜರ್ ಅವರು ಎರಡು ಲಕ್ಷ ರೂ.ಗಳ ಚೆಕ್ ಅನ್ನು ಜಿಲ್ಲಾಧಿಕಾರಿ ಮಾಯಾಂಕ್ ಅಗ್ರವಾಲ್ ಅವರಿಗೆ ನೀಡಿದ್ದು, ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಬದಲು ಕೆಲವರ ಜೀವವನ್ನು ಉಳಿಸುವ ಪುಣ್ಯಕಾರ್ಯ ತಮ್ಮಿಂದಾಗಲಿ ಎಂದಿದ್ದಾರೆ.

driving

ಇವರ ಮಗಳು ಸನಿಕಾಓಳ ಮದುವೆ ನಿಶ್ಚಯವಾಗಿದೆ. ಮದುವೆಗೆಂದು ಇವರು ಹಣ ಹೊಂದಿಸಿ ಇಟ್ಟಿದ್ದರು. ಆದರೆ ಈಗ ಅದಕ್ಕಿಂತಲೂ ಮುಖ್ಯವಾದ ಕಾರ್ಯ ಜನರ ಜೀವ ಕಾಪಾಡುವುದು ಎಂದು ಎನಿಸಿ ಹೀಗೆ ಮಾಡಿದ್ದಾರೆ. ನನ್ನ ಮಗಳ ಮದುವೆಯನ್ನು ಸ್ಮರಣೀಯವಾಗಿಸಲು ನಾನು ಎರಡು ಲಕ್ಷವನ್ನು ಜಿಲ್ಲಾಡಳಿತಕ್ಕೆ ದೇಣಿಗೆ ನೀಡಿದ್ದೇನೆ ಇದರಿಂದ ಅವರು ಎರಡು ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಬಹುದು ಎಂದರು. ಮಗಳು ಕೂಡ ತಂದೆಯ ಕಾರ್ಯವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

- Advertisement -

Related news

error: Content is protected !!