- Advertisement -
- Advertisement -
ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ನಲ್ಲಿ ಹೊರಟಿದ್ದ ತಂದೆ-ಮಗ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹೊಸಪೇಟೆ- ಕುಷ್ಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಇರಕಲ್ ಗಡಾ ನಿವಾಸಿಗಳಾದ ಮೌನೇಶ್ 32, ದೇವೇಂದ್ರಪ್ಪ 55 ಎಂದು ಗುರುತಿಸಲಾಗಿದೆ.
ಕುಷ್ಟಗಿ ರಸ್ತೆಯ ಕೂಕನಪಳ್ಳಿ ಸೀಮಾದ ಅಮರೇಶ್ವರ ದೇವಸ್ಥಾನ ಬಳಿ ಅಪಘಾತ ನಡೆದಿದೆ. ವೇಗವಾಗಿ ಬಂದ ಲಾರಿಯೊಂದು ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಬೈಕ್ನಿಂದ ರಸ್ತೆಗೆಸೆದಿದ್ದಾರೆ. ನಂತರ ದೇಹದ ಮೇಲೆ ಲಾರಿ ಹಾದು ಹೋಗಿದೆ. ಈ ಅಪಘಾತದಲ್ಲಿ ಇಬ್ಬರ ದೇಹ ಛಿದ್ರಛಿದ್ರವಾಗಿದೆ.
ಮೌನೇಶ್ ಕಳೆದ 15 ದಿನಗಳ ಹಿಂದೆ ಮದುವೆಯಾಗಿದ್ದ. ಆದರೆ ಲಾರಿ ಅಪಘಾತದಲ್ಲಿ ಒಂದೇ ಮನೆಯ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಇನ್ನು ಲಾರಿ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ನಡೆದಿದೆ ಎನ್ನಲಾಗುತ್ತಿದೆ. ಅಪಘಾತದ ಬಳಿಕ ತಮಿಳನಾಡು ಮೂಲದ ಲಾರಿ ಡ್ರೈವರ್ ರಾಜ.ಎಂ ನನ್ನು ಪೊಲೀಸರ್ ವಶಕ್ಕೆ ಪಡೆದಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -