- Advertisement -
- Advertisement -
ಕಾಸರಗೋಡು: ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬೈಕೊಂದು ಹತ್ತು ಅಡಿ ಆಳಕ್ಕೆ ಬಿದ್ದು ಪತ್ನಿ ಮೃತ ಪಟ್ಟು ಪತಿ ಹಾಗೂ ಪುತ್ರಿ ಗಂಭೀರ ಗಾಯ ಗೊಂಡ ಘಟನೆ ಬದಿಯಡ್ಕ ಉಬ್ರಂಗಳ ದಲ್ಲಿ ನಡೆದಿದೆ.
ಮಾವಿನಕಟ್ಟೆ ಯ ಅನೂಷ (25) ಮೃತಪಟ್ಟವರು. ಪತಿ ದಿನೇಶ್ ಮತ್ತು ಎರಡು ವರ್ಷದ ಪುತ್ರಿ ಶಿವನ್ಯಾ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಬ್ರಂಗಳ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಬೈಕ್ 10 ಅಡಿ ಆಳದ ಹೊಂಡ ಕ್ಕೆ ಬುಧವಾರ ರಾತ್ರಿ ಬಿದ್ದಿದ್ದು, ಬೊಬ್ಬೆ ಕೇಳಿ ಸ್ಥಳೀಯರು ಬಂದು ಮೂವರನ್ನು ಮೇಲಕ್ಕೆತ್ತಿ ಬದಿಯಡ್ಕದ ಆಸ್ಪತ್ರೆಗೆ ಸಾಗಿಸಲಾಯಿತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಿನೇಶ್ ಮತ್ತು ಶಿವನ್ಯಾ ರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ . ಆದರೆ ಅದಾಗಲೇ ಅನೂಷ ಮೃತ ಪಟ್ಟಿದ್ದರು.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ನೀಡಲಾಯಿತು. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ
- Advertisement -