


ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಕುಡಿಪ್ಪಾಡಿ ಬಿಲ್ಲವ ಗ್ರಾಮ ಸಮಿತಿ ಇದರ ವಾರ್ಷಿಕ ಮಹಾಸಭೆ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ 22-06-2025 ನೇ ರವಿವಾರ ಅಪರಾಹ್ನ ಗಂಟೆ 4:00 ಕ್ಕೆ ಅರ್ಕ ಹಿ.ಪ್ರಾ ಶಾಲಾ ವಠಾರದಲ್ಲಿ ಜರುಗಿತು.
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡಂಜಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಲ್ಲವ ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಬಿಲ್ಲವ ಸಂಘದ ಉಪಾಧ್ಯಕ್ಷೆ ವಿಮಲ ಸುರೇಶ್, ಚಿದಾನಂದ ಸುವರ್ಣ ಗೆಣಸಿನಕುಮೇರು, ಬಿಟಿ ಮಹೇಶ್ಚಂದ್ರ ಸಾಲಿಯಾನ್-ಕೋಶಾಧಿಕಾರಿ ತಾಲೂಕು ಬಿಲ್ಲವ ಸಂಘ, ಉದಯಕುಮಾರ್ ಕೋಲಾಡಿ – ಕಾರ್ಯನಿರ್ವಹಣಾಧಿಕಾರಿ ಗುರು ಮಂದಿರ, ಕಿರಣ್ ಪೂಜಾರಿ ಬಲ್ನಾಡು,- ವಲಯ ಸಂಚಾಲಕರು, ಅಣ್ಣಿ ಪೂಜಾರಿ- ಅಧ್ಯಕ್ಷರು ಯುವ ವಾಹಿನಿ ಘಟಕ, ಸೋಮಶೇಖರ ಪೂಜಾರಿ ಓಜಾಳ- ಅಧ್ಯಕ್ಷರು ಗ್ರಾಮ ಪಂಚಾಯತ್ ಕುಡಿಪ್ಪಾಡಿ, ಕೇಶವ ಸುವರ್ಣ- ಅಧ್ಯಕ್ಷರು ಬಿಲ್ಲವ ಗ್ರಾಮ ಸಮಿತಿ ಕುಡಿಪ್ಪಾಡಿ, ಶ್ರೀಮತಿ ತೇಜಾಕ್ಷಿ ಹರಿಶ್ಚಂದ್ರ ಪೂಜಾರಿ ಕುದ್ಮಾರು ಅಧ್ಯಕ್ಷೆ ಮಹಿಳಾ ಬಿಲ್ಲವ ಗ್ರಾಮ ಸಮಿತಿ ಕುಡಿಪ್ಪಾಡಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಬಂದಂತಹ ಅತಿಥಿಗಳು ಪುಸ್ತಕ ವಿತರಣೆ ಮಾಡಿದರು. ರಾಧಾಕೃಷ್ಣ ಪೂಜಾರಿ ಅರ್ಕ ಸ್ವಾಗತಿಸಿ, ಸರೋಜಿನಿ ಅರ್ಕ ವರದಿ ಮಂಡಿಸಿದರು. ಸುನಿತಾ ಬನ್ಪುಗುಡ್ಡೆ ಧನ್ಯವಾದ ಸಮರ್ಪಿಸಿದರು. ಕೃಷ್ಣ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿ, ಲಘುಪರ ದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.