- Advertisement -
- Advertisement -
ಶಿವಮೊಗ್ಗ: ಖಾಸಗಿ ಬಸ್ನಲ್ಲಿ ಇದ್ದ ಬೆಂಕಿ ನಿರೋಧಕ ಸಿಲಿಂಡರ್(ಫೈರ್ ಎಕ್ಸ್ಟಿಂಗ್ವಿಶರ್) ಲಾಕ್ ಓಪನ್ ಆದ ಪರಿಣಾಮ ಬಸ್ಸಿನಲ್ಲಿ ಹೊಗೆ ತುಂಬಿಕೊಂಡಿದ್ದು, ಪ್ರಾಣರಕ್ಷಣೆಗಾಗಿ ಪ್ರಯಾಣಿಕರು ಬಸ್ನಿಂದ ಹೊರಹಾರಿದ ಘಟನೆ ಸಾಗರ ತಾಲೂಕಿನ ಸಿರಿವಂತೆ ಗ್ರಾಮದ ಬಳಿ ನಡೆದಿದೆ.
ಇದ್ದಕ್ಕಿದ್ದಂತೆ ಖಾಸಗಿ ಬಸ್ನಲ್ಲಿದ್ದ ಬೆಂಕಿ ನಿರೋಧಕ ಸಿಲಿಂಡರ್ ಲಾಕ್ ಓಪನ್ ಆಗಿದ್ದು ಬಸ್ಸಿನೊಳಗೆ ಹೊಗೆ ತುಂಬಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಒಬ್ಬೊಬ್ಬರಾಗಿ ಬಸ್ಸಿನಿಂದ ಹೊರಗೆ ಹಾರಿದ್ದಾರೆ. ಈ ವೇಳೆ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಸಿರಿವಂತೆ ಎಂಬ ಮಹಿಳೆಗೆ ಗಂಭೀರವಾದ ಗಾಯವಾಗಿದೆ.
ಘಟನೆ ನಡೆದ ಸ್ಥಳಕ್ಕೆ ಅಂಬುಲೆನ್ಸ್ ಬರದ ಕಾರಣ ಅಲ್ಲಿನ ನಿವಾಸಿಗಳು ಹಾಗೂ ಕಿಂಗ್ ಹೋಟೆಲ್ ಮಾಲೀಕ ಜಾವಿದ್ ರವರು ಗಾಯಾಳುಗಳನ್ನ ಟಾಟಾ ಏಸ್ ವಾಹನದ ಮುಖಾಂತರ ಸಾಗರದ ಭಗವತ್ ನರ್ಸಿಂಗ್ ಹೋಮ್ಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement -