ಸುಳ್ಯ: ಬಸ್ಗಾಗಿ ಕಾಯುತ್ತಿದ್ದ ನಾಲ್ವರು ಯುವಕರ ಮೈಮೇಲೆ ಪಿಕಪ್ ಹರಿದು ಇಬ್ಬರು ಗಂಭೀರ ಗಾಯಗೊಂಡು, ಓರ್ವ ಮೃತಪಟ್ಟ ಘಟನೆ ಪೆರಾಜೆ ಗ್ರಾಮದ ಕಲ್ಲುಚರ್ಪೆ ಬಳಿ ನಡೆದಿದೆ.
ದುಗಲಡ್ಕ ನಿವಾಸಿಗಳಾದ ರಫೀಕ್, ಮುರ್ಷಾದ್, ಸತೀಶ್, ಉಮ್ಮರ್ ಇವರುಗಳು ತೊಡಿಕಾನದಲ್ಲಿ ಅಡಿಕೆ ಮರ ಕಡಿಯುವ ಕೆಲಸ ನಿರ್ವಹಿಸಿ ಮನೆಗೆ ತೆರಳಲು ಪೆರಾಜೆ ಕಲ್ಲುಚರ್ಪೆ ಬಳಿ ಬಸ್ ಗೆ ಕಾಯುತ್ತಿದ್ದ ಸಂದರ್ಭದಲ್ಲಿ ಅತಿ ವೇಗದಲ್ಲಿ ಬಂದ ಪಿಕಪ್ ಬ್ಯಾರಿಕ್ಯಾಡ್ ಗೆ ಗುದ್ದಿ ಅಲ್ಲೆ ಸಮಿಪದಲ್ಲಿ ನಿಂತಿದ್ದ ಈ ಮೂವರ ಮೇಲೆ ಹರಿದು ಗಂಭೀರ ಗಾಯಗೊಂಡರು.
ಗಾಯಗೊಂಡ ಸತೀಶ್ ,ಮುರ್ಷಾದ್ ಹಾಗೂ ಉಮ್ಮರ್ ರವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುಲಾಯಿತು. ಮಂಗಳೂರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಗಂಭೀರ ಗಾಯಗೊಂಡಿದ್ದ ಕೊಳಂಜಿಕೋಡಿಯ ಹಸೈನಾರ್ ರವರ ಪುತ್ರ ಮುರ್ಷಾದ್ ಮೃತಪಟ್ಟಿದ್ದಾರೆ.
ಪಿಕಪ್ ಚಾಲಕ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.