Monday, April 29, 2024
spot_imgspot_img
spot_imgspot_img

ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಬಗ್ಗೆ ಶಿಬಿರ ನಡೆಸಿದ ಮುಸ್ಲಿಂ ಸಮುದಾಯ ಒಕ್ಕೂಟ

- Advertisement -G L Acharya panikkar
- Advertisement -

ಮುಸ್ಲಿಂ ಸಮುದಾಯ ಒಕ್ಕೂಟ ಇದರ ವತಿಯಿಂದ ಜನಪ್ರಿಯ ಸೆಂಟ್ರಲ್ ಸ್ಕೂಲ್ ಸಹಕಾರದೊಂದಿಗೆ ಪಂಚಾಯತ್ ಅಧಿಕಾರಿಗಳ ಸಹಯೋಗದೊಂದಿಗೆ ಇಂದು ಜನಪ್ರಿಯ ಸೆಂಟ್ರಲ್ ಸ್ಕೂಲ್ ಕಂಬಳಬೆಟ್ಟು ಇಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ ಹಾಗು ಗೃಹ ಲಕ್ಷ್ಮೀ ಯೋಜನೆಗಳ ಅರ್ಜಿ ಸಲ್ಲಿಸುವಿಕೆ ಶಿಬಿರ ಆಯೋಜಿಸಲಾಗಿತ್ತು.

ಸುಮಾರು 150 ಫಲಾನುಭವಿಗಳು ಇದರ ಪ್ರಯೋಜನ ಪಡೆದರು ಈ ಶಿಬಿರ ಕಾರ್ಯಕ್ರಮಕ್ಕೆ ಶಾಸಕರಾದ ಅಶೋಕ್ ಕುಮಾರ್ ರೈ ಕೊಡಿಂಬಾಡಿಯವರು ಬೇಟಿ ಕೊಟ್ಟು ಆಯೋಜಕರಿಗೆ ಇಂತಹ ಜನಪರ ಕಾರ್ಯಕ್ರಮಗಳ ಶಿಬಿರ ಆಯೋಜಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು. ಹಾಗು ಸಹಕರಿಸಿದ ಪಂಚಾಯತ್ ಸಿಬ್ಬಂದಿ ವರ್ಗದ ಉತ್ತಮ ನಡೆಯನ್ನು ಶ್ಲಾಘಿಸಿ ಸರಕಾರದ ಜನಪರ ಕಾರ್ಯಗಳು ಮನೆ ಮನೆ ತಲುಪಬೇಕೆಂದು ತಿಳಿಸಿ ಅಧಿಕಾರಿಗಳ ಉತ್ತಮ ನಡೆಗೆ ಅಭಿನಂಧಿಸಿದರು.

ಶಾಲಾ ಮುಖ್ಯಸ್ಥರಾದ ಡಾ.ಅಬ್ದುಲ್ ಬಶೀರ್ ರವರಿಗೆ ಕರೆ ಮಾಡಿ ಜನಪರ ಕಾರ್ಯಗಳಿಗೆ ವೇದಿಕೆ ಒದಗಿಸಿಕೊಟ್ಟದಕ್ಕೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿ‌.ಕೆ ಅಬ್ದುಲ್ ಖಾದರ್ ಹಾಜಿ ಬದ್ರಿಯಾ.ವಿ.ಕೆ.ಅಬ್ದುಲ್ ಖಾದರ್ ಹಾಜಿ ಸುನ್ನಿ ಹಾಗು ಮುಸ್ಲಿಂ ಸಮುದಾಯ ಒಕ್ಕೂಟದ ಪಧಾದಿಕಾರಿಗಳಾದ ರಿಯಾಝ್ ಪರ್ಲಡ್ಕ ನಗರಸಭಾ ಸದಸ್ಯರು ಪುತ್ತೂರು ಹಾಗು ಶಾಹುಲ್ ಹಮೀದ್ ಕಂಬಳಬೆಟ್ಟು,ಝುಬೈರ್ ಪಿ.ಕೆ.ಸಿನಾನ್ ಪರ್ಲಡ್ಕ,ರಶೀದ್ ಮುರ.ಖಾದರ್ ಕಂಬಳಬೆಟ್ಟು ಹಾಗು ವಿಟ್ಲ ಮುಡ್ನೂರು ವಲಯ ಕಾಂಗ್ರೆಸ್ ನ ಸುಶಾಂತ್ ಶೆಟ್ಟಿ,ರಾಮಣ್ಣ ಪಿಳಿಂಜ,ಸುಮಿತ್ ಶೆಟ್ಟಿ ಹಾಗು ಪಂಚಾಯತ್ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

- Advertisement -

Related news

error: Content is protected !!