- Advertisement -
- Advertisement -
ಮಂಗಳೂರು: ನಗರದ ನಂತೂರು ಬಳಿ ಇಂದು ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಾಲ್ ಸಾರ್ ಅವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಕತ್ತಾಲ್ ಸಾರ್ ಅವರು ಇಂದು ಮುಂಜಾನೆ ಸುಮಾರು 5.15ರ ವೇಳೆಗೆ ಬಿಕರ್ಣಕಟ್ಟೆಗೆ ತೆರಳುತ್ತಿದ್ದಾಗ ನಂತೂರು ಜಂಕ್ಷನ್ ಬಳಿ ಮೀನಿನ ವಾಹನ ಕಾರಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಕಾರಿನಲ್ಲಿರುವ ಏರ್ ಬ್ಯಾಗ್ ತೆರೆದುಕೊಂಡಿತು. ಕತ್ತಾಲ್ ಸಾರ್ ಅವರ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement -