- Advertisement -
- Advertisement -
ಕಾರ್ಕಳ: ದ್ವಿಚಕ್ರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದು ಸವಾರ ಜೀವಪಾಯದಿಂದ ಪಾರಾದ ಘಟನೆ ನಗರದ ಕರಿಯಕಲ್ಲು ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-169 ರಲ್ಲಿ ನಡೆದಿದೆ.
ಬಜಗೋಳಿ ಕಡೆಯಿಂದ ಕಾರೊಂದು ಅತೀ ವೇಗವಾಗಿ ಕಾರ್ಕಳ ಕಡೆಗೆ ಬರುತ್ತಿದ್ದು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಘಟನೆಯ ತೀವ್ರತೆಗೆ ಸವಾರನು ಕಾರಿನ ಗಾಜಿನ ಮೇಲೆ ಹಾರಿಬಿದ್ದು ತಲೆಗೆ ಗಾಯವಾಗಿದೆ.ನಿಯಂತ್ರಣ ತಪ್ಪಿದ ಕಾರಿನ ಚಕ್ರ ರಸ್ತೆ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣಿನ ಹೂತು ಹೋಗಿರುವುದಿಂದ ಅಲ್ಲಿಯೇ ನಿಂತು ಹೋಗಿದೆ.
ಕಾರಿನ ಹಿಂಭಾಗದಲ್ಲಿ ಟೂರಿಸ್ಟ್ ವಾಹನದ ಜಾಹೀರಾತು ಕಂಡುಬರುತ್ತಿದೆ.ದ್ವಿಚಕ್ರ ವಾಹನ ಕಾರಿನ ಮುಂಭಾಗದಲ್ಲಿ ಸಿಲುಕಿಕೊಂಡು ಸಂಪೂರ್ಣ ನುಜ್ಜುಗುಜ್ಜಾಗಿದೆ.ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣಾ ಪೊಲೀಸರು ಅಗಮಿಸಿದ್ದಾರೆ .ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
- Advertisement -