Friday, May 3, 2024
spot_imgspot_img
spot_imgspot_img

ಕಡಬ: ಯುವಕನಿಗೆ ಜಾತಿ ನಿಂದನೆ ಮಾಡಿ ತಂಡದಿಂದ ಹಲ್ಲೆ; ಪ್ರಕರಣ ದಾಖಲು

- Advertisement -G L Acharya panikkar
- Advertisement -

ಕಡಬ: ಪರಿಶಿಷ್ಟ ಜಾತಿಗೆ ಸೇರಿದ ಯುವಕನಿಗೆ ತಂಡವೊಂದು ಮನೆಗೆ ಬಂದು ಅವ್ಯಾಚವಾಗಿ ಬೈದು ಕೈಯಿಂದ ಹಾಗು ಮರದ ಕೋಲಿನಿಂದ ಹಲ್ಲೆ ಮಾಡಿ ಮಾಡಿರುವ ಘಟನೆ ಕಡಬದ ಚಾರ್ವಾಕದಲ್ಲಿ ನಡೆದಿದ್ದು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕು ಚಾರ್ವಾಕ ನಿವಾಸಿ ಮನೋಹರ್ ಹಲ್ಲೆಗೊಳಗಾದವರು. ಗಣೇಶ ಉದನಡ್ಕ, ರಾಧಾಕೃಷ್ಣ ಮುದ್ದ ಅಖೀಲ್ ಬೊಮ್ಮಳಿಕೆ, ಉಮೇಶ್ ಬಿರೋಳಿಕೆ, ಯಶೋಧರ ಬಿರೋಳಿಕೆ ಹಾಗೂ ಇತರರು ಪ್ರಕರಣದ ಅರೋಪಿಗಳು.

ಹಲ್ಲೆಗೊಳಗಾದ ವ್ಯಕ್ತಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎನ್ನಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳು ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಚಾರ್ವಾಕ ಸೊಸೈಟಿಯ ಚುನಾವಣೆ ಸಂದರ್ಭ ಉಂಟಾದ ಮನಸ್ತಾಪದ ಮುಂದುವರಿದ ಭಾಗವಾಗಿ ಈ ಹಲ್ಲೆ ನಡೆದಿದೆ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಡಿ 17ರ ರಾತ್ರಿ ಮನೋಹರ್ ರವರು ಮನೆಯಲ್ಲಿದ್ದಾಗ, ಅವರ ಮನೆಯಂಗಳಕ್ಕೆ ಬಂದ ಆರೋಪಿಗಳು ಜಾತಿನಿಂದನೆ ಮಾಡಿ ಅವ್ಯಾಚವಾಗಿ ಬೈದು ಕೈಯಿಂದ ಹಾಗೂ ಮರದ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಮಗನ ಮೇಲೆ ಹಲ್ಲೆಯಾಗುವುದನ್ನು ನೋಡಿದ ಮನೋಹರ್ ಅವರ ತಾಯಿ ರಕ್ತದದೊತ್ತಡ ಕಡಿಮೆಯಾಗಿ ಕುಸಿದುಬಿದ್ದಿದ್ದಾರೆ.

ಗಲಾಟೆ ವಿಚಾರ ತಿಳಿದು ನೆರಮನೆಯವರು ಘಟನಾ ಸ್ಥಳಕ್ಕೆ ಬಂದಾಗ ಆರೋಪಿಗಳು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆಂದು ಮನೋಹರ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!