Friday, March 29, 2024
spot_imgspot_img
spot_imgspot_img

ಚೆನ್ನರಾಯಪಟ್ಟಣ: ಟಿಪ್ಪರ್ ಹಾಗೂ ಆಲ್ಟೋ ಕಾರು ಡಿಕ್ಕಿ; ಪುತ್ತೂರು, ವಿಟ್ಲ ಮೂಲದ ಇಬ್ಬರು ದಾರುಣ ಸಾವು, ಓರ್ವ ಗಂಭೀರ..!

- Advertisement -G L Acharya panikkar
- Advertisement -

ಚೆನ್ನರಾಯಪಟ್ಟಣ: ಟಿಪ್ಪರ್ ಹಾಗೂ ಆಲ್ಟೋ ಕಾರು ನಡುವೆ ಅಪಘಾತ ಸಂಭವಿಸಿ ಇಬ್ಬರು ದಾರುಣ ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಚನ್ನರಾಯ ಪಟ್ಟಣದ ಚಿಕ್ಕಗೊಂಡನ ಹಳ್ಳಿ ಎಂಬಲ್ಲಿ ಜ. 14ರಂದು ಬೆಳಗ್ಗೆ ಸಂಭವಿದೆ.

vtv vitla

ಮೃತರನ್ನು ವಿಟ್ಲದ ಬಾರೆಬೆಟ್ಟು ನಿವಾಸಿ ಸುದರ್ಶನ್, ಈಶ್ವರ ಮಂಗಲದ ಕರ್ನೂರು ನಿವಾಸಿ ದೇವಿಪ್ರಸಾದ್ ಶೆಟ್ಟಿ (30) (ಇವರು ಇನ್ಫೋಸಿಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು) ಎನ್ನಲಾಗಿದೆ. ಮತ್ತೋರ್ವ ಪುತ್ತೂರು ನಿವಾಸಿ ಪ್ರಮೋದ್ ಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಚೆನ್ನರಾಯಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಆಲ್ಟೋ ಕಾರಿಗೆ ಚನ್ನರಾಯ ಪಟ್ಟಣದ ಬಳಿ ಅಪಘಾತ ಸಂಭವಿದೆ ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!