Thursday, July 23, 2026
spot_imgspot_img
spot_imgspot_img

ಚಿಕ್ಕಮಗಳೂರು:ಅಂಗನವಾಡಿ ಬಳಿ ಆಟವಾಡುತ್ತಿದ್ದಾಗ ತಗುಲಿದ ಕಬ್ಬಿಣದ ತಂತಿ – ಮಗುವಿನ ಮರ್ಮಾಂಗಕ್ಕೆ 6 ಹೊಲಿಗೆ

- Advertisement -
- Advertisement -

ಚಿಕ್ಕಮಗಳೂರು: ಅಂಗನವಾಡಿ ಮುಂಭಾಗದಲ್ಲಿ ಆಟವಾಡುತ್ತಿದ್ದಾಗ ಮಗುವಿನ ಕಬ್ಬಿಣದ ತಂತಿ ತಗುಲಿ 6 ಹೊಲಿಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ನಗರದ ಗೌರಿಕಾಲುವೆ ಬಡಾವಣೆಯಲ್ಲಿ ನಡೆದಿದೆ.ಗೌರಿ ಕಾಲುವೆಯ ಅಮೃತಾ ಎಂಬ ಪೋಷಕರು ತಮ್ಮ ಮಗುವನ್ನ ಅಂಗನವಾಡಿಗೆ ಕಳುಹಿಸಿದ್ದರು. ಮಗು ಅಂಗನವಾಡಿ ಮುಂಭಾಗದಲ್ಲಿ ಆಟವಾಡುತ್ತಿತ್ತು. ಈ ವೇಳೆ ಮುಂಭಾಗದ ಮರಕ್ಕೆ ಹಾಕಿದ್ದ ಕಬ್ಬಿಣದ ತಂತಿ ಮಗುವಿಗೆ ತಾಗಿದೆ. ಪರಿಣಾಮ ಮರ್ಮಾಂಗದಲ್ಲಿ ರಕ್ತಸಾವ್ರವಾಗಿದೆ. ಆದರೆ ಅಂಗನವಾಡಿ ಶಿಕ್ಷಕಿ ಪೋಷಕರಿಗೆ ಯಾವುದೇ ಮಾಹಿತಿ ನೀಡದೇ ಬೇರೆ ಮಗುವಿನ ಜೊತೆ ಗಾಯಗೊಂಡ ಮಗುವನ್ನ ಮನೆಗೆ ಕಳಿಸಿದ್ದಾರೆ.

ಮನಗೆ ಬಂದ ಬಳಿಕವೂ ಮಗು ಆಳುತ್ತಿದ್ದದ್ದನ್ನು ಗಮನಿಸಿದ ತಾಯಿ ಹತ್ತಿರ ಹೋಗಿ ನೋಡಿದಾಗ ರಕ್ತಸ್ರಾವವಾಗುತ್ತಿರುವುದು ಗೊತ್ತಾಗಿದೆ. ಕೂಡಲೇ ಮಗುವನ್ನ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ಮಗುವಿನ ಮರ್ಮಾಂಗಕ್ಕೆ ಆರು ಹೊಲಿಗೆ ಹಾಕಿದ್ದಾರೆ. ಅಂಗನವಾಡಿಯಲ್ಲಿ ಶಿಕ್ಷಕಿಯ ಬೇಜವಾಬ್ದಾರಿಯಿಂದಲೇ ಮಗುವಿಗೆ ಹೀಗಾಗಿದೆ ಎಂದು ಪೋಷಕರು ಅಂಗನವಾಡಿ ಶಿಕ್ಷಕಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!