- Advertisement -
- Advertisement -
ಚಿಕ್ಕಮಗಳೂರು: ಹಣ ವಸೂಲಿ ಮಾಡಿದ ಆರೋಪದ ಮೇಲೆ ಜಿಲ್ಲೆಯ ಓರ್ವ ಪಿಎಸ್ಐ ಸೇರಿದಂತೆ 7 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಎಸ್ಪಿ ಅಕ್ಷಯ್ ಆದೇಶ ಹೊರಡಿಸಿದ್ದಾರೆ.
ಆಲ್ದೂರು ಹಾಗೂ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಪ್ರಕರಣವೊಂದರಲ್ಲಿ ಹಣ ವಸೂಲಿ ಮಾಡಿರುವ ಎರಡು ಪ್ರತ್ಯೇಕ ಪ್ರಕರಣ ಕೇಳಿ ಬಂದಿತ್ತು. ಈ ಹಿನ್ನೆಲೆ ತನಿಖೆ ನಡೆಸಿ, ಬಸವನಹಳ್ಳಿ ಪಿಎಸ್ಐ ಸುಖೇತ್, ಪೇದೆಗಳಾದ ಲಕ್ಷ್ಮಣ್, ಪ್ರದೀಪ್, ಯುವರಾಜ್ ಹಾಗೂ ಆಲ್ದೂರು ಪೊಲೀಸ್ ಠಾಣೆಯ ನವೀನ್, ಶಶಿಧರ್, ಅರುಣ್ ಕುಮಾರ್ ಹಾಗೂ ಸ್ವಾಮಿ ಎಂಬುವವರನ್ನ ಅಮಾನತು ಮಾಡಲಾಗಿದೆ.
- Advertisement -