Thursday, April 25, 2024
spot_imgspot_img
spot_imgspot_img

ಕ್ರೈಸ್ತ ಯುವಕನ ಮನೆಯಲ್ಲಿ ಇಬ್ಬರು ಹಿಂದೂ ಯುವತಿಯರು-ಹಿಂದೂ ಸಂಘಟನೆ, ಪೊಲೀಸರ ಮಿಂಚಿನ ದಾಳಿ

- Advertisement -G L Acharya panikkar
- Advertisement -

ವಿಟ್ಲ: ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವಕನೊಬ್ಬ ವಿವಿಧ ಆಮೀಷ ಒಡ್ಡಿ ಹಿಂದು ಸಮುದಾಯದ ಇಬ್ಬರು ಯುವತಿಯರನ್ನು ತನ್ನ ಮನೆಗೆ ಕರೆಯಿಸಿ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ವಿಟ್ಲ ಪೊಲೀಸರು ದಾಳಿ ನಡೆಸಿದ ಘಟನೆ ಕನ್ಯಾನ ಸಮೀಪದ ಕೇಪುಳಗುಡ್ಡೆ ಎಂಬಲ್ಲಿ ನಡೆದಿದೆ‌.

ಕನ್ಯಾನ ಕಾಲೇಜು ಸಮೀಪ ಕ್ರೈಸ್ತ ಸಮುದಾಯದ ಯುವಕಗೆ ಸಂಬಂಧಿಸಿದ ಫ್ಯಾನ್ಸಿ ಅಂಗಡಿ ಇದ್ದು, ಅಲ್ಲಿಗೆ ಬರುತ್ತಿದ್ದ ಯುವತಿಯರಿಗೆ ವಿವಿಧ ಆಮೀಷಗಳನ್ನು ನೀಡುತ್ತಿದ್ದ. ಅವರನ್ನು ಬಲವಂತವಾಗಿ ಪುಸಲಾಯಿಸಲು ಯತ್ನಿಸುತ್ತಿದ್ದ ಎಂಬ ಆರೋಪವಿದೆ‌. ಕರೋಪಾಡಿ ಗ್ರಾಮದ ಒಂದೇ ಮನೆಯ ಅಕ್ಕ ಹಾಗೂ ಸಹೋದರಿಯರಿಗೆ ಆಮೀಷ ಒಡ್ಡಿ ಅವರನ್ನು ಮನೆಗೆ ಕರೆ ತಂದಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀರಿಗೆ ಮಾಹಿತಿ ನೀಡಿದ್ದು, ಪೊಲೀಸರು ದಾಳಿ ನಡೆಸಿದ್ದಾರೆ.

ಇದೀಗ ಮೂವರನ್ನು ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಈತನ ಬಗ್ಗೆ ಈ ಹಿಂದೆ ಮತಾಂತರ ಕ್ಕೆ ಸಂಬಂಧ ಪಟ್ಟಂತೆ ಮೂರು ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿತ್ತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಅಮಾಯಕ ಹಿಂದು ಯುವತಿಯರ ತಲೆ ಕೆಡಿಸಿ, ಮತಾಂತರಕ್ಕೆ ಯತ್ನಿಸುತ್ತಿದ್ದ ಯುವಕನ ಹಾಗೂ ಆತನಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.

- Advertisement -

Related news

error: Content is protected !!