Monday, April 29, 2024
spot_imgspot_img
spot_imgspot_img

ಅಕ್ರಮ‌ ಸಂಬಂಧಕ್ಕೆ ಒಪ್ಪದ ವಿವಾಹಿತ ಮಹಿಳೆ- ಮನನೊಂದು ಆತ್ಮಹತ್ಯೆಗೆ ಶರಣು

- Advertisement -G L Acharya panikkar
- Advertisement -

ವಿವಾಹಿತ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ನಗರದ ರಾಜಕುಮಾರ್ ನಗರ ಬಡಾವಣೆಯಲ್ಲಿ ನಡೆದಿದೆ. ಶಬನಮ್ ಸುಲ್ತಾನ್ (30) ಮೃತ ರ್ದುದೈವಿ.

ಮೃತ ಮಹಿಳೆ 12 ವರ್ಷದ ಹಿಂದೆ ಇರ್ಫಾನ್ ಎಂಬುವವರ ಜೊತೆ ಮದುವೆಯಾಗಿದ್ದರು. ಇದಾದ ಬಳಿಕ ಶಬನಮ್‌ ಇಸ್ಮಾಯಿಲ್ ಎಂಬಾತನ ಜೊತೆ ಗೆಳೆತನ ಬೆಳೆಸಿ, ಪ್ರೀತಿಯ ಬಲೆಗೆ ಬಿದ್ದು, ಎರಡು ತಿಂಗಳ ಹಿಂದೆ ಆತನೊಂದಿಗೆ ಮನೆ ಬಿಟ್ಟು ಹೋಗಿದ್ದರು. ಬಳಿಕ ಸಂಬಂಧಿಕರೆಲ್ಲರೂ ಸೇರಿ ರಾಜಿ ಸಂದಾನ‌ ಮಾಡಿದ ಬಳಿಕ ಮಹಿಳೆ ಮನೆಗೆ ವಾಪಸ್ ಬಂದಿದ್ದರು. ಮನಸ್ಸು ಬದಲಾಯಿಸಿ ಪತಿ ಹಾಗು ಮಕ್ಕಳೊಂದಿಗಿದ್ದ ಅನ್ನೋನ್ಯವಾಗಿದ್ದ ಶಬನಮ್ ಸುಲ್ತಾನ್‌ಗೆ ಇಸ್ಮಾಯಿಲ್​ ಕಿರುಕುಳ ನೀಡಿದ್ದು, ತನ್ನೊಟ್ಟಿಗೆ ಬರದಿದ್ದರೆ ಖಾಸಗಿ ಫೋಟೋ ಹಾಗೂ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದೀಗ ಇಸ್ಮಾಯಿಲ್​ನ ಕಿರುಕುಳ ಹಾಗೂ ಬೆದರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಪತಿ ಕಡೆಯವರು ಆರೋಪಿಸಿದ್ದಾರೆ.

- Advertisement -

Related news

error: Content is protected !!