Sunday, June 29, 2025
spot_imgspot_img
spot_imgspot_img

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಶಾಖಾ ಕಾರ್ಯದರ್ಶಿಯನ್ನು ಇರಿದು ಕೊಲೆ

- Advertisement -
- Advertisement -

ತ್ರಿಶೂರ್: ಕೇರಳದ ತ್ರಿಶೂರ್ ನಗರದಲ್ಲಿ ಭಾನುವಾರ ರಾತ್ರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಶಾಖಾ ಕಾರ್ಯದರ್ಶಿಯನ್ನು ಇರಿದು ಕೊಲೆ ಮಾಡಲಾಗಿದೆ.

ಎರಡು ಗುಂಪುಗಳ ಸದಸ್ಯರ ನಡುವಿನ ಘರ್ಷಣೆಯಲ್ಲಿ ಪಿಯು ಸನೂಪ್ (26) ಮೃತಪಟ್ಟಿದ್ದಾರೆ. ಘರ್ಷಣೆಯಲ್ಲಿ ಪಕ್ಷದ ಇತರ ಮೂವರು ಕಾರ್ಯಕರ್ತರು ಸಹ ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ಬೈಕ್ ರೇಸ್ ಕುರಿತಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆಯಿತು. ಗಲಾಟೆ ಹಿಂಸಾಚಾರಕ್ಕೆ ಕಾರಣವಾಯಿತು, ಮತ್ತು ಓರ್ವನ ಕೊಲೆಗೆ ಸಾಕ್ಷಿಯಾಗಿದೆ.

ಈಗಾಗಲೇ ಅಪರಾಧದಲ್ಲಿ ಭಾಗಿಯಾಗಿರರುವ ಆರು ಜನರು ಪರಾರಿಯಾಗಿದ್ದಾರೆ. ಸಿಪಿಐ (ಎಂ) ಕಾರ್ಯಕರ್ತನ ಹತ್ಯೆಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಎ.ಎ. ರಹೀಮ್ ಆರೋಪಿಸಿದ್ದಾರೆ.

- Advertisement -

Related news

error: Content is protected !!