Saturday, June 28, 2025
spot_imgspot_img
spot_imgspot_img

ದೆಹಲಿ ಮಾಜಿ ಮುಖ್ಯಮಂತ್ರಿ ಹತ್ಯೆಗೆ ‘ಸಂಚು’, ಅವರಿಗೆ ಏನಾದರೂ ಆದ್ರೆ ಅದಕ್ಕೆ ಬಿಜೆಪಿ ಹೊಣೆ: ಎಎಪಿ

- Advertisement -
- Advertisement -

ದೆಹಲಿ ಮಾಜಿ ಮುಖ್ಯಮಂತ್ರಿ, ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು “ಆಳವಾದ ಸಂಚು” ರೂಪಿಸಲಾಗಿದೆ ಎಂದು ಆರೋಪಿಸಿದ ಆಮ್ ಆದ್ಮಿ ಪಕ್ಷ(ಎಎಪಿ), ಅವರಿಗೆ ಏನಾದರೂ ಆದರೆ ಅದಕ್ಕೆ ಬಿಜೆಪಿಯೇ ಹೊಣೆ ಎಂದು ಶನಿವಾರ ಎಚ್ಚರಿಸಿದೆ.

ಪಶ್ಚಿಮ ದೆಹಲಿಯ ವಿಕಾಸಪುರಿಯಲ್ಲಿ ಕೇಜ್ರಿವಾಲ್ ಅವರ ‘ಪಾದಯಾತ್ರೆ’ ವೇಳೆ “ಬಿಜೆಪಿ ಗೂಂಡಾಗಳು” ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ಎಎಪಿ ನಾಯಕರು ಶುಕ್ರವಾರ ಹೇಳಿದ್ದರು.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು, ಪಾದಯಾತ್ರೆ ವೇಳೆ ನಡೆದ ಘಟನೆಯಲ್ಲಿ ಪೋಲಿಸ್ ಸಹಭಾಗಿತ್ವವು ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ರೂಪಿಸಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಬಿಜೆಪಿ ಅವರನ್ನು ಮುಗಿಸುವ ಶತ್ರುವಾಗಿದೆ ಎಂದು ಆರೋಪಿಸಿದರು. ಸಂಜಯ್ ಸಿಂಗ್ ಅವರ ಆರೋಪದ ಬಗ್ಗೆ ಪೊಲೀಸರು ಅಥವಾ ಬಿಜೆಪಿಯಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕೇಜ್ರಿವಾಲ್ ಮೇಲೆ ದಾಳಿ ಬಗ್ಗೆ ಎಎಪಿ ಏಕೆ ದೂರು ದಾಖಲಿಸಿಲ್ಲ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಪೊಲೀಸರು “ನಿಷ್ಪಕ್ಷಪಾತ”ವಾಗಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಮತ್ತು ಬಿಜೆಪಿ ಯುವ ಘಟಕಕ್ಕೆ ಸೇರಿದ ದಾಳಿಕೋರರ ಗುಂಪನ್ನು ತಡೆಯಲು ಅದರ ಅಧಿಕಾರಿಗಳು ಏನನ್ನೂ ಮಾಡಲಿಲ್ಲ ಎಂದು ಹೇಳಿದರು.

- Advertisement -

Related news

error: Content is protected !!