- Advertisement -
- Advertisement -
ಬಂಟ್ವಾಳ: ಪ್ರತಿಷ್ಠಿತ ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಸಂತೋಷ್ ರವರ ಬಾವ ಶರಣಬಸಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಸಂತೋಷ್ ಮೇ.6 ರಂದು ಸಂಜೆ, ಅವರ ಮನೆಯಾದ ಪುತ್ತೂರು ತಾಲೂಕು, ಬಜತ್ತೂರು ಗ್ರಾಮದ, ವಲಾಲ್ ಎಂಜಿರಡ್ಕ ಎಂಬಲ್ಲಿಂದ, ಮಂಗಳೂರಿಗೆ ಆಕ್ಟಿವಾದಲ್ಲಿ ಕೆಲಸಕ್ಕೆ ಹೋಗಿದ್ದು, ತಡರಾತ್ರಿ ಮೂತ್ರ ಶಂಕೆಗೆಂದು ತನ್ನ ಸ್ಕೂಟರ್ ನ್ನು ಬಂಟ್ವಾಳದ ಬಂಟರ ಭವನದ ಎದುರು ಇರುವ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ, ನಡೆದುಕೊಂಡು ಹೋಗುತ್ತಿರುವಾಗ, ಕಂಪೌಂಡ್ ಪಕ್ಕದ ಆಳ ಜಾಗಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಎಡವಿ ಬಿದ್ದು ತಲೆಗೆ ತೀವ್ರ ರೀತಿಯ ಗಾಯಗೊಂಡು ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಅ.ಕ್ರ : 17/2024 ಕಲಂ 174 ಸಿ.ಆರ್ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -