- Advertisement -
- Advertisement -


ಕಲಬುರಗಿ: ವಿಚಾರಣಾಧೀನ ಕೈದಿಯೊರ್ವ ಜೈಲಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸೇಡಂ ಜೈಲಿನಲ್ಲಿ ಶನಿವಾರ ನಡೆದಿದೆ.
ಮುಹಮ್ಮದ್ ರಿಯಾಝ್ (32) ಹೃದಯಾಘಾತದಿಂದ ಮೃತಪಟ್ಟಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಒಂದೂವರೆ ವರ್ಷಗಳ ಹಿಂದೆ ರಿಯಾಝ್ ಗೆ ಕಳ್ಳತನ ಪ್ರಕರಣದಲ್ಲಿ ಜೈಲು ಆಗಿತ್ತು ಎಂದು ತಿಳಿದುಬಂದಿದೆ.ಜೈಲಿನಲ್ಲಿ ಹೃದಯಾಘಾತದ ನಂತರ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸುವಾಗಲೇ ಕೈದಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
- Advertisement -








