Monday, June 30, 2025
spot_imgspot_img
spot_imgspot_img

ಡಿ.5 ರಂದು ಕರ್ನಾಟಕ ಬಂದ್ ಶತಸಿದ್ಧ-ವಾಟಾಳ್ ನಾಗರಾಜ್

- Advertisement -
- Advertisement -

ಚಾಮರಾಜನಗರ: ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದತಿಗೆ ಸರ್ಕಾರಕ್ಕೆ ಕೊಟ್ಟಿರುವ ಗಡುವು ಮುಗಿಯುತ್ತಿದೆ. ಸರ್ಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಹಾಗಾಗಿ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಶತಸಿದ್ಧ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಮರಾಠಿ ಪ್ರಾಧಿಕಾರ ಮಾಡಿದ ಮೇಲೆ ಉಳಿದ ಭಾಷಿಕರು ಕೇಳುತ್ತಿದ್ದಾರೆ. ಈ ಅನಾಹುತ ಕ್ಕೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕಾರಣವಾಗಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ಅಥವಾ ನಿಗಮ ರಚನೆ ಮಾಡುವುದು ಅಪಾಯದ ಸಂಕೇತವಾಗಿದ್ದು. ರಾಜ್ಯದ ಇತಿಹಾಸದಲ್ಲೇ ಯಾವ ಮುಖ್ಯ ಮಂತ್ರಿಯು ಇಂತಹ ತಪ್ಪು ನಿರ್ಧಾರ ಕೈಗೊಂಡಿರಲಿಲ್ಲ ಎಂದರು.

ಬಂದ್ ಗೆ 1050ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಬೆಂಬಲ ಸೂಚಿಸಿದ್ದು. ಅಂದು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗುತ್ತೆ. ಯಾವುದೇ ಕಾರಣಕ್ಕು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಡಿ. 5 ರಂದು ಕರ್ನಾಟಕ ಬಂದ್ ಮಾಡಿಯೇ ತೀರುತ್ತೇವೆ ನಾವೆಲ್ಲಾ ಜೈಲಿಗೆ ಹೋಗಲು ಸಿದ್ದರಿದ್ದೇವೆ ಎಂದರು.

- Advertisement -

Related news

error: Content is protected !!