Thursday, April 25, 2024
spot_imgspot_img
spot_imgspot_img

ಚಿತ್ರೀಕರಣ ಮುಗಿಸಿದ ಧರ್ಮ ದೈವ ಭಾಗ -2

- Advertisement -G L Acharya panikkar
- Advertisement -

ತುಳು ಕಿರುಚಿತ್ರ ಇತಿಹಾಸದಲ್ಲಿ ಹೊಸ ವ್ಯಖ್ಯಾನ ಬರೆದ ಧರ್ಮ ದೈವ ಕಿರುಚಿತ್ರ ಇದೀಗ ಭಾಗ ಎರಡಾಗಿ ತೆರೆಯ ಮೇಲೆ ಬರಲು ಸಿದ್ಧತೆ ನಡೆಸಿದೆ ಬೆಳ್ಳಾರೆ ಸುತ್ತಮುತ್ತ ಚಿತ್ರತಂಡ ಚಿತ್ರೀಕರಣ ಪೂರ್ಣಗೋಳಿಸಿದೆ ಅಂತಾರಾಷ್ಟ್ರೀಯ ಕ್ರೀಡಾಪಟು ಸುಬಾಶ್ಚಂದ್ರ ರೈ ತೋಟ ಪ್ರಾರ್ಥನೆ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು.ತರವಾಡು ಮನೆಯ ಲಕ್ಷ್ಮೀನಾರಾಯಣ ರೈ ಬಂಡಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸೋನು ಕ್ರಿಯೆಶನ್ಸ್ ಬ್ಯಾನರ್ ನಡಿಯಲ್ಲಿ ಸುಧಾಕರ್ ಪಡೀಲ್ ಚಿತ್ರವನ್ನು ನಿರ್ಮಿಸಿದ್ದು ನಿತಿನ್ ರೈ ಕುಕ್ಕುವಳ್ಳಿ ಕಥೆ ಬರೆದು ಚಿತ್ರವನ್ನು ನಿರ್ದೇಶಸಿದ್ದಾರೆ. ಮೊದಲ ಭಾಗದಲ್ಲಿ ಕೆಲಸ ಮಾಡಿದ ತಂಡವೆ ಎರಡನೆ ಭಾಗದಲ್ಲಿ ಕೆಲಸಮಾಡಿದೆ. ಹಮೀದ್ ಪುತ್ತೂರು ಸಂಭಾಷಣೆ ಮತ್ತು ಚಿತ್ರಕಥೆ ಬರೆದಿದ್ದು, ಹರೀಶ್ ಪುತ್ತೂರು ಕ್ಯಾಮರಾ, ರಾಧೆಶ್ ರೈ ಮೋಡಪ್ಪಾಡಿ, ಧ್ವನಿಗ್ರಹನ ಮತ್ತು ಸಂಕಲನ ಧನು ರೈ ಪೋಸ್ಟರ್, ರಾಜ್ ಪ್ರೊಡಕ್ಷಣ್, ಸಂಜು ಯುನಿಟ್ ಇಂಜಿನಿಯರ್, ನಿತಿನ್ ಕಾನಾವು ಟೈಟಲ್ ಕಾರ್ಡ್, ಪ್ರೇಮ್ ಅರ್ಲಪದವು ಮೇಕಪ್ ಮಾಡಿದ್ದು ಮಂಜುನಾಥ್ ಬಲ್ಪ ಮತ್ತು ಕೌಶಿಕ್ ಕುಂಜಾಡಿ ನಿರ್ಮಾಣ ನಿರ್ವಹಣೆ ಕೆಲಸ ಮಾಡಿದ್ದಾರೆ.

ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಸುಂದರ್ ರೈ ಮಂದಾರ, ದೀಕ್ಷಾ ಡಿ ರೈ, ಚಿತ್ತರಂಜನ್ ಶೆಟ್ಟಿ ನುಳಿಯಲು, ಜ್ಯೋತಿ ಕುಲಾಲ್, ಅರುಣ್ ಶೆಟ್ಟಿ ಪೇಜಾವರ, ವಸಂತ ಲಕ್ಷ್ಮಿ, ಕೌಶಿಕ್ ರೈ ಕುಂಜಾಡಿ, ಅಜಿತ್ ರೈ ಮೆರ್ಲ ಮುಂತಾದವರು ನಟಿಸಿದ್ದಾರೆ.

- Advertisement -

Related news

error: Content is protected !!