Monday, June 30, 2025
spot_imgspot_img
spot_imgspot_img

ಧರ್ಮನಗರ: ಚಿಣ್ಣರಿಗಾಗಿ ಚೈತ್ರ ಶಿಬಿರ ಕಾರ್ಯಕ್ರಮ ಉದ್ಘಾಟನೆ

- Advertisement -
- Advertisement -

ಧರ್ಮನಗರ: ಧರ್ಮನಗರ ಸಮಾಜ ಮಂದಿರದಲ್ಲಿ ಒಂದು ವಾರಗಳ ಕಾಲ ಚಿಣ್ಣರಿಗಾಗಿ ಚೈತ್ರ ಶಿಬಿರ ಕಾರ್ಯಕ್ರಮ ನಡೆಯಲಿದೆ. ವಿಟ್ಲದ ಜನಪ್ರಿಯ ದಂತ ವೈದ್ಯೆ ರಮ್ಯಾ ಚರಣ್ ಕಜೆ ಇವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಧರ್ಮನಗರದ ಶ್ರೀ ಜಯದುರ್ಗಾಪರಮೇಶ್ವರಿ ಭಜನಾ ಸಮಿತಿಯ ಅಧ್ಯಕ್ಷ ನಂದಕುಮಾರ್ ಧರ್ಮನಗರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ನಿವೃತ್ತ ಶಿಕ್ಷಕ ರಾಧಾಕೃಷ್ಣಾ ಅಡ್ಯಂತಾಯರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ರಾಧಾಕೃಷ್ಣ ಅಡ್ಯಂತಾಯ ಮತ್ತು ಅವರ ಬಳಗದಿಂದ ರಾಮನವಮಿಯ ಪ್ರಯುಕ್ತ ವೀರ ಮಾರುತಿಯ ಕಥೆಯನ್ನು ಹರಿಕಥೆಯ ರೂಪದಲ್ಲಿ ನಡೆಸಿದರು. ಮೊದಲ ದಿನ ಶಿಬಿರದಲ್ಲಿ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಒಂದು ವಾರಗಳ ಕಾಲ ವಿವಿಧ ಚಟುವಟಿಕೆಗಳು, ದೇಶ ಧರ್ಮ, ನಮ್ಮ ಸಂಸ್ಕಾರ ಸಂಸ್ಕೃತಿಗಳ ಅರಿವು ಮೂಡಿಸುವ ವಿವಿಧ ಕಾರ್ಯಕ್ರಮಗಳು ನಡೆದು ಶಿಬಿರವು 13/05/2025ನೇ ಆದಿತ್ಯವಾರದಂದು ಸಮಾರೋಪಗೊಳ್ಳಲಿದೆ.

ಮಾತಾಜಿ ಸುಚಿತ್ರ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು, ಲಕ್ಷ್ಮಿ ಉರಿಮಜಲು ವಂದಿಸಿದರು. ಜೈದೀಪ್ ಅಮೈ ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

Related news

error: Content is protected !!