Friday, June 27, 2025
spot_imgspot_img
spot_imgspot_img

ಧರ್ಮಸ್ಥಳ: ಹೆಣ ಹೂತಿದ್ದ ಸ್ಥಳಗಳನ್ನು ಗುರುತು ಮಾಡ್ತೇನೆ ಹೇಳಿದ್ದ ಅಪರಿಚಿತ ವ್ಯಕ್ತಿ: ಎಸ್‌ಪಿ ಭೇಟಿಗಾಗಿ ಮಂಗಳೂರಿಗೆ ಆಗಮಿಸಿದ ವಕೀಲರ ತಂಡ..!!

- Advertisement -
- Advertisement -

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣಗಳಲ್ಲಿ ಕೊಲೆ ಮಾಡಿ ಹೆಣ ಹೂತಿದ್ದ ಸ್ಥಳಗಳನ್ನು ಗುರುತಿಸುವುದಾಗಿ ಇತ್ತೀಚೆಗೆ ವ್ಯಕ್ತಿಯೊಬ್ಬ ಪೊಲೀಸರ ಮುಂದೆ ಹೇಳಿದ್ದ ಎಂಬ ವಿಚಾರಗಳ ಮಧ್ಯೆ ಇದೀಗ ಬೆಂಗಳೂರಿನ ವಕೀಲರ ತಂಡ ಮಂಗಳೂರು ಎಸ್ ಪಿ ಕಚೇರಿಗೆ ಆಗಮಿಸಿದೆ.

ದ.ಕ ಎಸ್ ಪಿಯನ್ನು ಭೇಟಿಯಾಗಿ ದಾಖಲೆಗಳನ್ನು ನೀಡುವುದಾಗಿ ಇತ್ತೀಚೆಗೆ ವಕೀಲರಿಬ್ಬರು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದರು. ಎಸ್‌ಪಿ ಭೇಟಿಗಾಗಿ ವಕೀಲ ತಂಡ ಮಂಗಳೂರಿಗೆ ಆಗಮಿಸಿದ್ದರು. ತುರ್ತು ಕೆಲಸ ನಿಮಿತ್ತ ಎಸ್ ಪಿ ಡಾ ಅರುಣ್ ಬೆಂಗಳೂರಿಗೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ನಾಳೆ ಮತ್ತೆ ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -

Related news

error: Content is protected !!