Saturday, April 20, 2024
spot_imgspot_img
spot_imgspot_img

ED ಬಲೆಯಲ್ಲಿ ರಾಹುಲ್ ಗಾಂಧಿ; ಯೂತ್‌ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಅರೆಸ್ಟ್‌..! ನಿನ್ನೆ ಕಾಲ್ಕಿತ್ತ ಬಿ ವಿ ಶ್ರೀನಿವಾಸ್‌ ನಡೆಗೆ ಸಿಟಿ ರವಿ ವ್ಯಂಗ್ಯ

- Advertisement -G L Acharya panikkar
- Advertisement -
ರಾಹುಲ್‌ ಗಾಂಧಿಗೆ ಇಡಿ ಬಿಸಿ ಮುಟ್ಟಿದೆ. ಇಂದೂ ಸಹ ಇಡಿ ತಂಡ ರಾಹುಲ್‌ ಗಾಂಧಿಯನ್ನು ಗ್ರಿಲ್ ಮಾಡಿದ್ದಾರೆ. ಈ ನಡುವೆ ಕಾಂಗ್ರೆಸ್‌ನ ಹೈಡ್ರಾಮಾ..! ಪೊಲೀಸರಿಂದ ತಪ್ಪಿಸಿ ಎಸ್ಕೇಪ್ ಆದ ಯೂಥ್ ಕಾಂಗ್ರೆಸ್‌ ಅಧ್ಯಕ್ಷ..! ಬಿವಿ ಶ್ರೀನಿವಾಸ್‌ಗೆ ರನ್ನಿಂಗ್ ರೇಸ್‌ನಲ್ಲಿ ಉಜ್ವಲ ಭವಿಷ್ಯವಿದೆ ಎಂದು ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ತನಿಖೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು 2 ದಿನವೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಸೋಮವಾರ, ಹಲವಾರು ಕಾಂಗ್ರೆಸ್ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ಇಂದೂ ಸಹ ಹಲವಾರು ಕಾಂಗ್ರೆಸ್ ಮುಖಂಡರನ್ನು ಬಂಧಿಸಲಾಯಿತು. ಆದರೆ ಪೊಲೀಸರು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರನ್ನು ಬಲವಂತವಾಗಿ ಬಂಧಿಸಲು ಪೊಲೀಸರು ಬಂದಾಗ ಹೈಡ್ರಾಮವೇ ನಡೆಯಿತು. ಪೊಲೀಸರನ್ನು ವಿರೋಧಿಸಿ ನೆಲಕ್ಕೆ ಉರುಳಿ ವಿರೋಧ ವ್ಯಕ್ತಪಡಿಸಿದರು. ನಂತರ ಪೊಲೀ‌ಸರು ವ್ಯಾನ್‌ನಲ್ಲಿ ಹಾಕಿ ಕರೆದೊಯ್ದಿದ್ದಾರೆ.

ಪೊಲೀಸರು ಬಂದಾಗ ಕಾಲ್ಕಿತ್ತ ಬಿವಿಎಸ್‌

ನಿನ್ನೆ ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಯ ಹೊರಗೆ ಕಾಂಗ್ರೆಸ್ ನಾಯಕರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ಪೊಲೀಸರು ಶ್ರೀನಿವಾಸ್ ಅವರನ್ನು ಬಂಧಿಸಲು ಬಂದಿದ್ದಾರೆ. ಆಗ ಅಲ್ಲಿಂದ ಶ್ರೀನಿವಾಸ್ ಕಾಲ್ಕಿತ್ತು ಎಸ್ಕೇಪ್ ಆಗಿದ್ದಾರೆ.

ಈ ಸನ್ನಿವೇಶಕ್ಕೆ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಬಿ ವಿ ಶ್ರೀನಿವಾಸ್ ಅವರಿಗೆ ಉಜ್ವಲ ಭವಿಷ್ಯವಿದೆ. ಆದರೆ ರಾಜಕಾರಣದಲ್ಲಿ ಅಲ್ಲ, ರನ್ನಿಂಗ್ ರೇಸ್‌ನಲ್ಲಿ ಎಂದಿದ್ದಾರೆ.

- Advertisement -

Related news

error: Content is protected !!