- Advertisement -
- Advertisement -
ವಿಟ್ಲ : ಶ್ರೀ ಧರ್ಮಶಾಸ್ತ ಭಕ್ತವೃಂದ, ಶ್ರೀ ಭಗವತೀ ದೇವಸ್ಥಾನ ವಿಟ್ಲ ವತಿಯಿಂದ, ಮೋನಪ್ಪ ಗುರುಸ್ವಾಮಿ ನೇತೃತ್ವದಲ್ಲಿ ಶ್ರೀ ಭಗವತೀ ದೇವಸ್ಥಾನ ವಿಟ್ಲ, ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ, ಶ್ರೀ ಧರ್ಮಶಾಸ್ತ ಭಜನಾ ಮಂಡಳಿ ವಿಟ್ಲ ಹಾಗೂ ಶ್ರೀ ಭಗವತೀ ಯುವಕ ಮಂಡಲ ವಿಟ್ಲ ಇದರ ಸಹಕಾರದೊಂದಿಗೆ ಶ್ರೀ ಭಗವತೀ ದೇವಸ್ಥಾನದಲ್ಲಿ ನಡೆದ ಏಕಾಹ ಭಜನೆಯ ಮಂಗಲೋತ್ಸವ ಕಾರ್ಯಕ್ರಮ ನಿನ್ನೆ ಬೆಳಗ್ಗೆ ನಡೆಯಿತು.
ಪ್ರಾತಃಕಾಲ ನಡೆದ ಕುಣಿತ ಭಜನೆಯಲ್ಲಿ ಗುರುಸ್ವಾಮಿಯವರೊಂದಿಗೆ ಅಯ್ಯಪ್ಪ ಸ್ವಾಮೀ ವೃತದಾರಿಗಳು ಭಜನೆಗೆ ಹೆಜ್ಜೆ ಹಾಕಿದರು.
ಬಳಿಕ ಏಕಾಹ ಭಜನಾ ಸೇವೆಯ ಬಗ್ಗೆ ಅವಲೋಕನ ಸಭೆ ನಡೆಸಲಾಯಿತು. ಸಭೆಯಲ್ಲಿ ಭಜನಾ ಸೇವೆಯಲ್ಲಿ ಪಾಲ್ಗೊಂಡು ಭಜನಾ ಸೇವೆ ನಡೆಸಿಕೊಟ್ಟ ಭಜನಾ ತಂಡಗಳಿಗೆ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಶ್ರಮ ವಹಿಸಿದ ಸರ್ವ ಭಕ್ತಾದಿಗಳಿಗೆ ಧನ್ಯವಾದ ಸಲ್ಲಿಸಲಾಯಿತು.
- Advertisement -