- Advertisement -
- Advertisement -
ಬೆಂಗಳೂರು : ರಾಜ್ಯದ 147 ಗ್ರಾಮಪಂಚಾಯಿತಿಗಳಿಗೆ ಉಪಚುನಾವಣೆಯೂ ಮಾರ್ಚ್ 29 ರಂದು ನಡೆಯಲಿದ್ದು, ಈ ಸಂಬಂಧ ರಾಜ್ಯ ಚುನಾವಣಾ ಆಯೋಗವು ಮಾರ್ಚ್ 15 ರಂದು ಅಧಿಸೂಚನೆ ಹೊರಡಿಸಲಿದೆ.ರಾಜ್ಯದಲ್ಲಿ ಅವಧಿ ಮುಕ್ತಾಯವಾಗಿರುವ 68 ಗ್ರಾಪಂ ಗಳಿಗೆ ಸಾರ್ವತ್ರಿಕ ಚುನಾವಣೆ ವಿವಿಧ ಕಾರಣಗಳಿಂದ ತೆರವಾಗಿರುವ 147 ಗ್ರಾಪಂಗಳಿಗೆ ಮಾರ್ಚ್ 29 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 19 ರಂದು ನಾಮಪತ್ರ ಸಲ್ಲಿಸಲು ಕೊನೇ ದಿನ.
ಮಾರ್ಚ್ 20 ರಂದು ನಾಮಪತ್ರಗಳನ್ನು ಪರಶೀಲಿಸಲಾಗುತ್ತದೆ. ಮಾರ್ಚ್ 22 ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ.ಮಾರ್ಚ್ 31 ರಂದು ಮತ ಎಣಿಕೆ ನಡೆಯಲಿದೆ ಎಂದು ಆಯೋಗವು ತಿಳಿಸಿದೆ.
- Advertisement -