- Advertisement -
- Advertisement -
ಕಾಪು:-ಉಡುಪಿಯ ಕಾಪು ತಾಲೂಕಿನ ಎರ್ಮಾಳು ತೆಂಕ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರಕ್ಕೆ ಕಳ್ಳರ ಲಗ್ಗೆ ಹಾಕಿದ್ದಾರೆ. ಮಂದಿರದಲ್ಲಿದ್ದ ಗುರುಗಳ ಬೆಳ್ಳಿ ಪಾದುಕೆ ಕಳವು ಮಾಡಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಬಾಗಿಲು ಮುರಿದ ಕಳ್ಳರು ಸುಮಾರು ಐವತ್ತು ಸಾವಿರ ರೂ ಬೆಲೆ ಬಾಳುವ ಗುರುಗಳ ಬೆಳ್ಳಿಯ ಪಾದುಕೆ ಕಳವು ಮಾಡಿರುವ ಘಟನೆ ಬುಧವಾರ ಮುಂಜಾನೆ ಬೆಳಕಿಗೆ ಬಂದಿದೆ.
ಮುಂಬಾಗಿಲು ಮುರಿದು ಗರ್ಭಗುಡಿಯ ಚಿಲಕವನ್ನೂ ಮುರಿದು ಜಾಲಾಡಿದ ಕಳ್ಳರು ಬೃಹತ್ ಕಾಣಿಕೆ ಹುಂಡಿಯನ್ನು ಒಡೆಯಲು ವಿಫಲ ಯತ್ನ ನಡೆಸಿದ್ದಾರೆ. ಅದು ಅಸಾಧ್ಯವಾದಾಗ ಗರ್ಭ ಗುಡಿಯ ಒಳಗಿದ್ದ ಬೆಳ್ಳಿ ಪಾದುಕೆ ಕಳವು ನಡೆಸಿ ಪರಾರಿದ್ದಾರೆ. ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
- Advertisement -