- Advertisement -
- Advertisement -
ತಂದೆಯೊಬ್ಬ ತನ್ನ ಮಗನ ಮೇಲೆ ಪೆಟ್ರೋಲ್ ಸುರಿದು ನಂತರ ಬೆಂಕಿ ಹಚ್ಚಿದ ಘಟನೆಯೊಂದು ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಆದರ್ಶ್ (28) ಎಂದು ಗುರುತಿಸಲಾಗಿದೆ. ಈತನನ್ನು ತಂದೆ ಜಯರಾಮಯ್ಯ(58) ಕೊಲೆ ಮಾಡಿದ್ದಾನೆ. ಆದರ್ಶ್ ದಿನನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು. ಇತ್ತೀಚೆಗೆ ತಾಯಿಯ ಬಳಿಯೂ ಕುಡಿಯಲು ಹಣ ಕೇಳಿದ್ದ. ಈ ವೇಳೆ ಹಣ ನೀಡಲು ಒಪ್ಪದ ತಾಯಿಗೆ ಮನಬಂದಂತೆ ಥಳಿಸಿದ್ದನು. ಇದರಿಂದ ಬೇಸತ್ತು ತಂದೆ ಜಯರಾಮಯ್ಯ ಮಗನನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.
ಅಂತೆಯೇ ಶುಕ್ರವಾರ ರಾತ್ರಿ ಬಾರ್ ಬಳಿ ಮಗನಿಗೆ ತಂದೆ ಹೊಡೆದಿದ್ದಾನೆ. ಈ ವೇಳೆ ಆದರ್ಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂತರ ಮಗನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಘಟನೆ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -