- Advertisement -
- Advertisement -
ಬೆಂಗಳೂರು: ಕೆಲವೇ ಕೆಲವು ತಿಂಗಳ ಹಿಂದೆ ಬೆಂಗಳೂರಿನ ಪ್ರಥಮ ಪ್ರಜೆ ಎಂಬ ಗೌರವಕ್ಕೆ ಪಾತ್ರರಾಗಿದ್ದ ಮಾಜಿ ಮೇಯರ್ ಸಂಪತ್ ರಾಜ್ ಇದೀಗ ವಿಚಾರಣಾಧೀನ ಖೈದಿ. ಅವರ ನಂಬರ್ 8759. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಅವರ ತಾತ್ಕಾಲಿಕ ವಿಳಾಸ.ಮೂರು ದಿನಗಳ ಕಾಲ ಅಲ್ಲಿಯೇ ವಾಸ.
ಜೈಲಿನಲ್ಲಿ ಎನ್ ಐ ಎ ವಿಚಾರಣೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್ ಐ ಎ ವಿಚಾರಣೆಗೆ ನ್ಯಾಯಾಲಯ ಅನುಮತಿ ನೀಡಿದೆ. ಬೆಂಗಳೂರು ಹಿಂಸಾಚಾರದ ಆರೋಪಿಯಾಗಿರುವ ಸಂಪತ್ ರಾಜ್ , ಪ್ರಕರಣದ 51ನೇ ಆರೋಪಿಯಾಗಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
- Advertisement -