- Advertisement -
- Advertisement -



ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ(ರಿ) ಶಾಂತಿನಗರ, ವಿಟ್ಲ ಇದರ ಆಶ್ರಯದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಮತ್ತು ಆನಂದಾಶ್ರಮ ಸೇವಾ ಟ್ರಸ್ಟ್ (ರಿ)ಪುತ್ತೂರು ಹಾಗೂ ಸಮುದಾಯ ಆರೋಗ್ಯ ಕೇಂದ್ರ, ವಿಟ್ಲ ಇವುಗಳ ಸಹಕಾರದೊಂದಿಗೆ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇದರ ತಜ್ಞ ವೈದ್ಯರಿಂದ ಕಣ್ಣಿನ ಚಿಕಿತ್ಸಾ ಶಿಬಿರವು ಅ.31ರಂದು ಅಕ್ಷಯ ಸಮುದಾಯ ಭವನ ಶಾಂತಿನಗರ ವಿಟ್ಲದಲ್ಲಿ ನಡೆಯಲಿದೆ.
ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕಣ್ಣಿನ ಆಪರೇಷನ್ ಉಚಿತವಾಗಿ ಮಾಡಲಾಗುವುದು, ಆಪರೇಷನ್ ಮಾಡಿಸುವವರು ಬರುವಾಗ ಎರಡು ದಿನಕ್ಕೆ ಬೇಕಾದಷ್ಟು ಬಟ್ಟೆ, ಊಟದ ತಟ್ಟೆ, ಲೋಟ ಮತ್ತು ಆಧಾರ್ಕಾರ್ಡ್ನೊಂದಿಗೆ ಒಬ್ಬ ಸಹಾಯಕನೊಡನೆ ಬರಬೇಕು.
ಲಭ್ಯ ಕನ್ನಡಕಗಳು ಆನಂದಾಶ್ರಮ ಸೇವಾ ಟ್ರಸ್ಟ್(ರಿ) ಪುತ್ತೂರು ವತಿಯಿಂದ ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -