Saturday, June 28, 2025
spot_imgspot_img
spot_imgspot_img

ಮಂಗಳೂರು : ಲಾರಿ ಮತ್ತು ಸ್ಕೂಟರ್‌ ನಡುವೆ ಭೀಕರ ಅಪಘಾತ – ಸ್ಕೂಟರ್‌ ಸವಾರ ಮೃತ್ಯು

- Advertisement -
- Advertisement -

ಮಂಗಳೂರು :ಲಾರಿ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್‌ ಸವಾರ ಮೃತಪಟ್ಟ ಘಟನೆ ನಡೆದಿದೆ.

ಮಂಜನಾಡಿಯ ಮಂಗಳಾಂತಿ ಮಸೀದಿ ಬಳಿ ಮಂಜೇಶ್ವರದ ಪೈವಳಿಕೆ ಕಲ್ಲೇಕರುಗುತ್ತು ನಿವಾಸಿ ಚಂದ್ರಹಾಸ್ ಶೆಟ್ಟಿ (67) ಮೃತ ವ್ಯಕ್ತಿ.

ಪ್ರಗತಿಪರ ರೈತ ಚಂದ್ರಹಾಸ ಶೆಟ್ಟಿ ಅವರು ಹರೇಕಲ್ ದೆಬ್ಬೇಲಿಯಲ್ಲಿರುವ ತಮ್ಮ ಪತ್ನಿಯ ಮನೆಯಿಂದ ಕಲ್ಲೇಕರುಗುತ್ತು ಕಡೆಗೆ ಹೋಗುತ್ತಿದ್ದಾಗ ನೆಟ್ಟಿಪಾಡು ಕಡೆಯಿಂದ ನಾಟೇಕಲ್ ಕಡೆಗೆ ವೇಗವಾಗಿ ಬಂದ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಡಿಕ್ಕಿಯ ರಭಸಕ್ಕೆ ಚಂದ್ರಹಾಸ್ ಶೆಟ್ಟಿಯವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!