- Advertisement -
- Advertisement -
ಗೋವುಗಳ ಗಂಜಲದ ಗುಂಡಿಗೆ ಬಿದ್ದು ತಂದೆ, ಮಗ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವರು ಮಹಾಲಿಂಗಪ್ಪ (50) ಹಾಗೂ ಅವರ ಪುತ್ರ ಪೃಥ್ವಿ (25) ಎಂದು ಗುರತಿಸಲಾಗಿದೆ.
ತೋಟದಲ್ಲಿನ ಅಡಿಕೆ ಸಸಿಗಳಿಗೆ ಹಾಕಲು ಗೋವಿನ ಗಂಜಲನ್ನು 8 ಅಡಿ ಗುಂಡಿಯಲ್ಲಿ ಸಂಗ್ರಹಿಸಿಡಲಾಗಿತ್ತು. ಆದರೆ ಇದನ್ನು ಗಮನಿಸದೇ ಮೊದಲು ತಂದೆ ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ತಂದೆಯನ್ನು ರಕ್ಷಣೆ ಮಾಡಲೆಂದು ಹೋಗಿ ಮಗನೂ ಗುಂಡಿಗೆ ಬಿದ್ದಿದ್ದಾನೆ. ಗಂಜಲಿನ ವಾಸನೆ ತಾಳಲಾರದೇ ತಂದೆ, ಮಗ ಇಬ್ಬರು ಅಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳಿದ್ದ ಹಿರಿಯೂರಿನ ಸರ್ಕಾರ ಆಸ್ಪತ್ರೆಯ ಶವಾಗಾರಕ್ಕೆ ತಹಶೀಲ್ದಾರ್ ರಾಜೇಶ್ಕುಮಾರ್ ಭೇಟಿ ನೀಡಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
- Advertisement -