Thursday, July 3, 2025
spot_imgspot_img
spot_imgspot_img

ತುಳುನಾಡು ಪೊರ್ಲು ಸೇವಾ ಟ್ರಸ್ಟ್(ರಿ.) ದ.ಕ ವತಿಯಿಂದ 2 ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು

- Advertisement -
- Advertisement -

ಕಳೆದ 8 ವರ್ಷದಿಂದ ಸಮಾಜಮುಖಿ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಸೇವಾ ಕಾರ್ಯದ ಭಾಗವಾಗಿ 2 ಅಶಕ್ತ ಕುಟುಂಬಕ್ಕೆ ಸಹಾಯ ಧನ ಬಿ.ಸಿ ರೋಡ್ ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ನಡೆಯಿತು.

ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿರುವ ಕಡಬ ತಾಲೂಕಿನ ಏನೆಕಲ್ಲು ಮಾಧನ ಮನೆತೋಟ ನಿವಾಸಿ ಪದ್ಮಿನಿ ಲಕ್ಷ್ಮಣ ಗೌಡ ದಂಪತಿಗಳ 3 ವರ್ಷದ ಹೆಣ್ಣು ಮಗಳಾದ ವಂಶಿಯ ಚಿಕಿತ್ಸೆಗಾಗಿ 52,875 ರೂಪಾಯಿ ಹಾಗೂ ಮೆದುಳಿನ ರಕ್ತ ಸ್ರಾವ ಸಮಸ್ಯೆಗೆ ತುತ್ತಾಗಿರುವ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಉಜಿರಡ್ಕ ಚಾರ್ಮತ ನಿವಾಸಿ ಗಂಗಾಧರ ನಾಯ್ಕ್ ಇವರ ಚಿಕಿತ್ಸೆಗೆ 15,000 ರೂಪಾಯಿ ಧನ ಸಹಾಯವನ್ನು ಬಿ.ಸಿ ರೋಡ್‌ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರ ನಡೆಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!