Monday, June 30, 2025
spot_imgspot_img
spot_imgspot_img

ಟೊಮೇಟೊ ವ್ಯಾಪಾರಿಗೆ 30 ಲಕ್ಷ ರೂ ಹಣದ ಬದಲಿಗೆ ಬಿಳಿ ಹಾಳೆ ಕಳುಹಿಸಿ ವಂಚನೆ

- Advertisement -
- Advertisement -

ವ್ಯಾಪಾರಿಯೊಬ್ಬರಿಂದ ಮೂರು ಲೋಡ್ ಟೊಮೇಟೊ ಪಡೆದು 30 ಲಕ್ಷ ರೂ. ಹಣ ನೀಡದೆ ವಂಚನೆ ಮಾಡಿರುವಂತಹ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆದಿತ್ಯ ಷಾ ಎಂಬುವವರು ಕೋಲಾರದ ಎಪಿಎಂಸಿ ಮಾರುಕಟೆಯಲ್ಲಿ ಟೊಮೇಟೊ ವ್ಯಾಪಾರಸ್ಥರಾಗಿದ್ದು,ಪಶ್ಚಿಮ ಬಂಗಾಳದ ಸಿಲಿಗುರಿ ಮಾರ್ಕೆಟ್​ನ ಮುಕೇಶ್​ ಎಂಬುವವರಿಗೆ ಆದಿತ್ಯಾ ಷಾ ಮೂರು ಲೋಡ್ ಟೊಮೇಟೊ ಕಳುಹಿಸಿದ್ದರು. ಮುಕೇಶ್ ಬೆಂಗಳೂರಿನ ಸಂಜಯ್​ ಎಂಬಾತನ ಬಳಿ ಹಣ ಕಳುಹಿಸುವುದಾಗಿ ಹೇಳಿದ್ದ. ಅದರಂತೆಯೇ ಕಳೆದ ತಿಂಗಳು 15 ರಂದು ಸಂಜಯ್​ ವೈಟ್ ಫೀಲ್ಡ್ ಬಳಿ ಹಣದ ಬ್ಯಾಗ್​​ ತೆಗೆದುಕೊಂಡು ಬಂದಿದ್ದ. 20 ಲಕ್ಷ ರೂ. ಹಣ ಇದೇ ಅಂತ ಬ್ಯಾಗ್​ ತೆಗೆದು ಹಣ ತೋರಿಸಿದ್ದ.

ಹಣ ನೋಡಿದ್ದ ಆದಿತ್ಯಾ 500 ಮುಖ ಬೆಲೆಯ ನೋಟಿನ ಮೇಲೆ ಆಕ್ಸಿಸ್ ಬ್ಯಾಂಕ್​​ ಸೀಲ್‌ ಕವರ್ ನೋಡಿ ಮನೆಗೆ ಹಣ ತೆಗೆದಕೊಂಡು ಹೋಗಿದ್ದರು. ಮನೆಗೆ ಹೋಗಿ ಹಣ ಏಣಿಕೆ ಮಾಡುವಾಗ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಹಣದ ಕಂತೆ ಮೇಲೆ ಮತ್ತು ಕೆಳಗೆ ಅಸಲಿ ನೋಟುಗಳಿದ್ದು, ಮಧ್ಯದಲ್ಲಿ ಬಿಳಿ ಹಾಳೆ ಇಟ್ಟು ಮೋಸ ಮಾಡಿದ್ದಾರೆ.

ಒಟ್ಟು 32 ಲಕ್ಷ ರೂ. ಪೈಕಿ 20 ಲಕ್ಷ ರೂ. ಕಳುಹಿಸಿದ್ದ ಆರೋಪಿಗಳು, ಕಳುಹಿಸಿದ್ದ 20 ಲಕ್ಷ ರೂ. ಹಣದಲ್ಲೂ ಬಿಳಿ ಹಾಳೆ ಇಟ್ಟು ಮೋಸ ಮಾಡಿದ್ದಾರೆ. ಈ ಬಗ್ಗೆ ಸಂಜಯ್ ಮತ್ತು ಮುಕೇಶ್ ಎಂಬುವವರ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಆದಿತ್ಯ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!