ಟೀ ಕುಡಿಯುವ ನೆಪದಲ್ಲಿ ಮಹಿಳೆಯನ್ನು ಮನೆಗೆ ಆಹ್ವಾನಿಸಿ ಗ್ಯಾಂಗ್ ರೇಪ್ ನಡೆಸಿದ ಪ್ರಕರಣ ಸಂಬಂಧ ಗೋಕಾಕ್ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಸೆಪ್ಟೆಂಬರ್ 5ರಂದು ಈ ಕೃತ್ಯ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯನ್ನು ಪುಸಲಾಯಿಸಿ ಮನೆಗೆ ಕರೆತಂದು ಬೆಳಗಿನಿಂದ ಸಂಜೆವೆರೆಗೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಈ ಪ್ರಕರಣ ಸಂಬಂಧ ಈಗಾಗಲೇ ದರೋಡೆ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದ್ದು ಇನ್ನೊಬ್ಬನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಭಯದಿಂದ ಅತ್ಯಾಚಾರದ ಬಗ್ಗೆ ಮಹಿಳೆ ದೂರು ದಾಖಲಿಸಿರಲಿಲ್ಲ. ಆದರೆ ದರೋಡೆ ಪ್ರಕರಣದಲ್ಲಿ ಬಂಧಿತವಾಗಿರುವ ಆರೋಪಿಗಳು ವಿಚಾರಣೆ ವೇಳೆ ಅತ್ಯಾಚಾರದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ
ಸಂತ್ರಸ್ತ ಮಹಿಳೆ ಸೆಪ್ಟೆಂಬರ್ 05 ರಂದು ಹಳ್ಳಿಯಿಂದ ಬಂದು ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಬಸ್ ನಿಲ್ದಾಣದಲ್ಲಿ ಪರಿಚಯಸ್ಥ ವ್ಯಕ್ತಿಯ ಜತೆಗೆ ನಿಂತಿದ್ದರು. ಈ ವೇಳೆ ಬಸವರಾಜ್ ಖಿಲಾರಿ ಎಂಬ ಆರೋಪಿ ಇಬ್ಬರ ಪರಿಚಯ ಹೊಂದಿದ್ದು ಟೀ ಕುಡಿಯಲು ಮನೆಗೆ ಆಹ್ವಾನಿಸಿದ್ದಾನೆ ಇಬ್ಬರನ್ನೂ ಆದಿತ್ಯ ನಗರದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಮನೆಗೆ ಬಂದ ವೇಳೆ ಇಬ್ಬರನ್ನೂ ಕೂಡಿ ಹಾಕಿ ಮತ್ತೆ ಐವರು ಆರೋಪಿಗಳ ಜೊತೆ ಸೇರಿ ಸಂಜೆವರೆಗೆ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಜೊತೆಗೆ ಮಹಿಳೆ ಜೊತೆ ಬಂದಿದ್ದ ಪುರುಷನನ್ನ ಜೊತೆ ನಿಲ್ಲಿಸಿ ‘ಖಾಸಗಿತನ’ದ ಫೋಟೊ ತೆಗೆದಿದ್ದಾರೆ.
ಈ ವಿಷಯ ಪೊಲೀಸರಿಗೆ ಹೇಳದಂತೆ ಮಹಿಳೆ ಹಾಗೂ ಪುರುಷನಿಗೆ ಹೆದರಿಸಿದ್ದಾರೆ. ಅಲ್ಲದೇ ಜತೆಗಿದ್ದ ವ್ಯಕ್ತಿ ಜತೆಗೆ ಮಹಿಳೆ ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ. ಸಂತ್ರಸ್ತರ ಬಳಿ ಇದ್ದ ಹಣ, ಒಡವೆ, ಎಟಿಎಂ ಕಾರ್ಡ್ ಪಡೆದು ಆರೋಪಿಗಳು ಪರಾರಿಯಾಗಿದ್ದಾರೆ.ಈ ಹಿನ್ನೆಲೆ ಸಂತ್ರಸ್ತ ಮಹಿಳೆ ದೂರು ನೀಡಲು ಹೆದರಿದ್ದಳು.
ಇನ್ನು ಸೆಪ್ಟೆಂಬರ್ 13ರಂದು ದರೋಡೆ ಪ್ರಕರಣವೊಂದರಲ್ಲಿ ಪೊಲೀಸರು ಕೆಲವರನ್ನ ಬಂಧಿಸಿದ್ದರು. ಈ ಸಮಯದಲ್ಲಿ ಗ್ಯಾಂಗ್ ರೇಪ್ ಮಾಡಿದ್ದನ್ನು ಆರೋಪಿಗಳು ತಾವಾಗಿಯೇ ಬಾಯ್ಬಿಟ್ಟಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮಹಿಳೆಯನ್ನು ಹುಡುಕಿ ಕರೆದುಕೊಂಡು ಬಂದು ಆಕೆಯಿಂದ ಕೇಸ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಮಹಿಳೆ ಹುಡುಕಿ ಕೇಸ್ ದಾಖಲಿಸಿಕೊಂಡ ಗೋಕಾಕ್ ಪೊಲೀಸರು. ಪ್ರಕರಣದ ಸಂಬಂಧ ಪ್ರಮುಖ ಆರೋಪಿ ಸೇರಿ ಐದು ಜನರ ಬಂಧನವಾಗಿದ್ದು, ರಮೇಶ್ ಖಿಲಾರಿ, ದುರ್ಗಪ್ಪಾ ವಡ್ಡರ್, ಯಲ್ಲಪ್ಪ , ಕೃಷ್ಣಾ , ರಾಮಸಿದ್ದ ತಪ್ಸಿ ಬಂಧಿತ ಆರೋಪಿಗಳು. ಇನ್ನು ಮಹಿಳೆಯನ್ನ ಮನೆಗೆ ಕರೆದುಕೊಂಡು ಬಂದಿದ್ದ ಪ್ರಮುಖ ಆರೋಪಿ ಬಸವರಾಜ ಖಿಲಾರಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.